alex Certify ಗಡ್ಡ ಬೆಳೆಸಿದ್ದ ಪೊಲೀಸ್​ ಅಧಿಕಾರಿ ಅಮಾನತು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಡ್ಡ ಬೆಳೆಸಿದ್ದ ಪೊಲೀಸ್​ ಅಧಿಕಾರಿ ಅಮಾನತು..!

ಅನುಮತಿ ಕೇಳದೇ ಗಡ್ಡ ಬೆಳೆಸಿದ್ದಾರೆ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಬಾಘ್​ಪತ್​ ಜಿಲ್ಲೆಯ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ರನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಎಸ್​ಐ ಇಂತೇಸಾರ್​ ಅಲಿ ಎಂಬವರು ಗಡ್ಡ ಬೆಳೆಸಿದ್ದ ಕಾರಣಕ್ಕೆ ಮೂರು ಬಾರಿ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿತ್ತು. ಆದರೂ ಸಹ ಗಡ್ಡ ಬೆಳೆಸಲು ಅನುಮತಿ ಕೋರದೇ ಅಲಿ ನಿರ್ಲಕ್ಷ್ಯ ತೋರಿದ್ದರು. ಹೀಗಾಗಿ ಅವರನ್ನ ಅಮಾನತು ಮಾಡಲಾಗಿದೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬಾಘ್​ಪತ್​ ಜಿಲ್ಲೆ ಪೊಲೀಸ್​ ವರೀಷ್ಠಾಧಿಕಾರಿ ಅಭಿಷೇಕ್​ ಸಿಂಗ್​, ಪೊಲೀಸ್​ ನಿಯಮಾವಳಿ ಅನ್ವಯ ಕೇವಲ ಸಿಖ್​ ಧರ್ಮೀಯರಿಗೆ ಮಾತ್ರ ಗಡ್ಡ ಬಿಡಲು ಅನುಮತಿ ಇದೆ. ಇನ್ನುಳಿದಂತೆ ಎಲ್ಲರೂ ಕೂಡ ಕ್ಲೀನ್​ ಶೇವ್​ನಲ್ಲೇ ಇರಬೇಕು ಅಂತಾ ರೂಲ್ಸ್ ಇದೆ. ಬಲವಾದ ಕಾರಣವಿದ್ದರೆ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಅನ್ಯಧರ್ಮೀಯರು ಕೂಡ ಗಡ್ಡ ಬಿಡಬಹುದು. ಆದರೆ ಅಲಿ ಮೂರು ಬಾರಿ ಎಚ್ಚರಿಕೆ ಪಡೆದ ಬಳಿಕವೂ ಯಾರ ಬಳಿಯೂ ಅನುಮತಿ ಕೇಳಿರಲಿಲ್ಲ. ಹೀಗಾಗಿ ಅವರನ್ನ ಅಮಾನತು ಮಾಡಲಾಗಿದೆ ಅಂತಾ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...