alex Certify ಈರುಳ್ಳಿಗಾಗಿ ಜಗಳ: ಸಹೋದ್ಯೋಗಿಗೆ ಚೂರಿಯಲ್ಲಿ ಇರಿದ ನೌಕರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈರುಳ್ಳಿಗಾಗಿ ಜಗಳ: ಸಹೋದ್ಯೋಗಿಗೆ ಚೂರಿಯಲ್ಲಿ ಇರಿದ ನೌಕರ

Upset Over Getting 'Less Onion Salad', Labourer Stabs Another after Heated Argument

ಈರುಳ್ಳಿ ಸಲಾಡ್ ‌ಅನ್ನು ಕೇಳಿದಷ್ಟು ಪ್ರಮಾಣದಲ್ಲಿ ಕೊಡಲಿಲ್ಲ ಎಂಬ ಕಾರಣಕ್ಕೆ 60 ವರ್ಷದ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಯೊಂದಿಗೆ ಕಚ್ಚಾಡಿ, ಆತನಿಗೆ ಚೂರಿಯಲ್ಲಿ ಇರಿದಿದ್ದಾನೆ.

ದೆಹಲಿಯ ಫತೇಪುರ ಬೇರಿಯಲ್ಲಿ ಈ ಘಟನೆ ಜರುಗಿದೆ. ಈ ಸಂಬಂಧ ಆಪಾದಿತ ರಿಯಾಸತ್‌ ಅಲಿ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, 500ಕ್ಕೂ ಹೆಚ್ಚು ಕಾರ್ಮಿಕರನ್ನು ಪ್ರಶ್ನಿಸಿದ್ದಾರೆ. ದೆಹಲಿಯಲ್ಲಿ ವಾಸಿಸುವ ತಾನೊಬ್ಬ ದಿನಗೂಲಿ ನೌಕರನಾಗಿದ್ದು, ಅನೇಕ ಕಡೆಗಳಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ಬಂಧಿತ ವ್ಯಕ್ತಿ ಹೇಳಿಕೊಂಡಿದ್ದಾನೆ. ಈರುಳ್ಳಿ ಸಲಾಡ್‌ ವಿಚಾರವಾಗಿ ತನ್ನ ಸುತ್ತಲಿದ್ದ ಜನರೊಂದಿಗೆ ವಾಗ್ವಾದ ನಡೆಸಿದ್ದಾಗಿ ಈತ ಹೇಳಿದ್ದಾನೆ.

ಉತ್ತರ ಪ್ರದೇಶದ ಬಡೌನ್ ಜಿಲ್ಲೆಯವನಾದ ಅಲಿ ತನ್ನೊಂದಿಗೆ ಕೆಲಸ ಮಾಡುವ ಪವನ್ ಹೆಸರಿನ ವ್ಯಕ್ತಿಯೊಂದಿಗೆ ಈರುಳ್ಳಿ ಸಲಾಡ್ ವಿಚಾರವಾಗಿ ವಾಗ್ವಾದಕ್ಕೆ ಇಳಿದಿದ್ದಾನೆ. ಅಡುಗೆ ಮನೆಯ ಚೂರಿಯಿಂದ ಪವನ್‌ ಕುಮಾರ್‌ಗೆ ಇರಿದಿರುವ ಈತ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...