alex Certify 5 ಕೆ.ಜಿ. ಬಾದಾಮಿಗಾಗಿ ಘಾಜಿಪುರದವರೆಗೆ ಓಡಿದ ಯುವಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

5 ಕೆ.ಜಿ. ಬಾದಾಮಿಗಾಗಿ ಘಾಜಿಪುರದವರೆಗೆ ಓಡಿದ ಯುವಕ…!

ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನ ವಿರೋಧಿಸಿ ನಡೆಯುತ್ತಿರುವ ರೈತ ಪ್ರತಿಭಟನೆಗೆ ಅನೇಕರು ವಿಭಿನ್ನ ಮಾರ್ಗಗಳ ಮೂಲಕ ಬೆಂಬಲ ನೀಡುತ್ತಿದ್ದಾರೆ.

ಡಿಸೆಂಬರ್​ನಲ್ಲಿ ಹರಿಯಾಣದ ವರನೊಬ್ಬ ತನ್ನ ಐಷಾರಾಮಿ ಕಾರನ್ನ ಬದಿಗಿಟ್ಟು ಟ್ರ್ಯಾಕ್ಟರ್​ನಲ್ಲಿ ಕಲ್ಯಾಣ ಮಂಟಪಕ್ಕೆ ಬರುವ ಮೂಲಕ ರೈತರಿಗೆ ಬೆಂಬಲ ನೀಡಿದ್ದರು.

ಕೆಲ ದಿನಗಳ ಬಳಿಕ ರೈತ ಮಹಿಳೆ ಮಂಜಿತ್​ ಕೌರ್​ ತನ್ನ ಸಹಚರರ ಜೊತೆ ಜೀಪ್​​ನ್ನ ತಾವೇ ಓಡಿಸಿಕೊಂಡು ಪ್ರತಿಭಟನಾ ಸ್ಥಳಕ್ಕೆ ಬಂದು ಸುದ್ದಿಯಾಗಿದ್ದರು.

ತೀರಾ ಇತ್ತೀಚೆಗೆ ಉತ್ತರಾಖಂಡ್​​ನ ದಂಪತಿ ತಮ್ಮ ವಿವಾಹ ಸಂದರ್ಭದಲ್ಲಿ ರೈತ ಗೀತೆಗಳನ್ನ ಹಾಡುವ ಮೂಲಕ ಹಾಗೂ ಟ್ರ್ಯಾಕ್ಟರ್​ಗಳನ್ನ ಬಳಕೆ ಮಾಡುವ ಮೂಲಕ ಕೃಷಿ ಮಸೂದೆಯನ್ನ ವಿರೋಧಿಸಿದ್ದರು.

ಇದೀಗ ಉತ್ತರ ಪ್ರದೇಶದ ಬಾಗ್​ಪತ್​ನ ಸಿಖೇರಾ ಗ್ರಾಮದ 25 ವರ್ಷದ ಯುವಕ ತನ್ನ ಗ್ರಾಮದಿಂದ ಘಾಜಿಪುರಕ್ಕೆ ಓಡಿಕೊಂಡೇ ಸಾಗುವ ಮೂಲಕ ಸುದ್ದಿಯಾಗ್ತಿದ್ದಾರೆ.

ಮೋನು ದಾಗರ್​ ಎಂಬಾತ ತನ್ನ ಸ್ನೇಹಿತರೊಂದಿಗೆ 5100 ರೂಪಾಯಿ ಹಾಗೂ 5 ಕೆಜಿ ಬಾದಾಮಿಯನ್ನ ಪಣಕ್ಕಿಟ್ಟಿದ್ದರು. ಬಳಿಕ ಈ ಸವಾಲಿನ ಭಾಗವಾಗಿ ತನ್ನ ಹಳ್ಳಿಯಿಂದ ಘಾಜಿಪುರ ಗಡಿಗೆ ಓಡಿ ಬರುವ ಮೂಲಕ ಈ ಸವಾಲನ್ನ ಗೆದ್ದಿದ್ದಾರೆ.

ಭಾನುವಾರ ಬೆಳಗ್ಗೆ 11 ಗಂಟೆಗೆ ತಮ್ಮ ಗ್ರಾಮದಿಂದ ಓಡಲು ಆರಂಭಿಸಿದ ಮೋನು ಸಂಜೆ 4 ಗಂಟೆ ಸುಮಾರಿಗೆ ಗಡಿ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನಿರಂತರ ಓಟದಿಂದಾಗಿ ಮೋನು ಆರೋಗ್ಯದಲ್ಲಿ ಏರುಪೇರಾಗಿದ್ದು ಚಿಕಿತ್ಸೆಗಾಗಿ ವೈದ್ಯಕೀಯ ಶಿಬಿರಕ್ಕೆ ದಾಖಲಿಸಲಾಯ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...