alex Certify ತಿಂಡಿ ತಿಂದ ಹಣ ಕೇಳಿದ್ದಕ್ಕೆ ತಂದೆ – ಮಗನನ್ನು ಕುದಿಯುವ ಎಣ್ಣೆಗೆ ನೂಕಿದ ಪಾಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿಂಡಿ ತಿಂದ ಹಣ ಕೇಳಿದ್ದಕ್ಕೆ ತಂದೆ – ಮಗನನ್ನು ಕುದಿಯುವ ಎಣ್ಣೆಗೆ ನೂಕಿದ ಪಾಪಿ

ಲಖನೌ:ತಿಂದ ತಿಂಡಿಗೆ ಹಣ ಕೇಳಿದ್ದಕ್ಕೆ ಬೀದಿ ಬದಿ ವ್ಯಾಪಾರಿ ಹಾಗೂ ಅವರ ಮಗನನ್ನು ಕುದಿಯುವ ಎಣ್ಣೆಗೆ ನೂಕಿದ ಘಟನೆ ಲಖನೌ ಗೋಮತಿ ನಗರದಲ್ಲಿ ನಡೆದಿದೆ.

ಗೋಮತಿ ನಗರದಲ್ಲಿ ಬೀದಿ ಬದಿಯಲ್ಲಿ ರಾಮನಾಥ ಯಾದವ್ ತಿಂಡಿ ವ್ಯಾಪಾರ ನಡೆಸಿದ್ದರು. ಮಕ್ಕಳಾದ ರಂಜಿತ್ ಹಾಗೂ ಪ್ರದೀಪ ಅವರಿಗೆ ಸಹಾಯ ಮಾಡುತ್ತಿದ್ದರು. ಡಿ.26 ರ ರಾತ್ರಿ 8 ಗಂಟೆ ಸುಮಾರಿಗೆ ಆಗಮಿಸಿದ ಕೆಲವು ಯುವಕರು ಸಮೋಸಾ ಹಾಗೂ ಪೂರಿ ತಿಂದಿದ್ದರು. ಅದರ ಹಣ ಕೇಳಿದ್ದಕ್ಕೆ ಸಿಟ್ಟುಗೊಂಡು ಹಲ್ಲೆ ನಡೆಸಿದ್ದಾರೆ.

ರಾಮನಾಥ ಹಾಗೂ ಮಗ ಪ್ರದೀಪ ಇಬ್ಬರಿಗೂ ಸುಟ್ಟು ಗಾಯವಾಗಿದೆ. ಇಬ್ಬರೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ‌. ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.‌ ಯುಪಿಯಲ್ಲಿ ಇತ್ತೀಚೆಗಷ್ಟೇ ಬೀದಿ ವ್ಯಾಪಾರಿ ಮೇಲೆ ಗುಂಡಿನ ದಾಳಿ‌ ನಡೆಸಲಾಗಿತ್ತು. ಅದು ಮಾಸುವ ಮೊದಲೇ ಮತ್ತೊಂದು‌ ಘಟನೆ ನಡೆದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se