alex Certify ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ನೀಡಿದ್ದ ನ್ಯಾಯಾಧೀಶರಿಗೆ ಭದ್ರತಾ ಅವಧಿ ಮುಂದುವರೆಸಲು ʼಸುಪ್ರೀಂʼ ನಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ನೀಡಿದ್ದ ನ್ಯಾಯಾಧೀಶರಿಗೆ ಭದ್ರತಾ ಅವಧಿ ಮುಂದುವರೆಸಲು ʼಸುಪ್ರೀಂʼ ನಕಾರ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತೀರ್ಪು ನೀಡಿ ನಿವೃತ್ತರಾಗಿದ್ದ ಸಿಬಿಐ ಕೋರ್ಟ್​ನ ವಿಶೇಷ ನ್ಯಾಯಾಧೀಶ ಎಸ್​.ಕೆ . ಯಾದವ್​ರಿಗೆ ಭದ್ರತಾ ಅವಧಿಯನ್ನ ಮುಂದುವರಿಸುವುದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ನಿವೃತ್ತ ನ್ಯಾಯಾಧೀಶ ಎಸ್.ಕೆ. ಯಾದವ್​ ಅವರಿಗೆ ಭದ್ರತೆ ಅವಶ್ಯಕತೆ ಇದೆ ಎಂದು ಎನಿಸುತ್ತಿಲ್ಲ ಅಂತಾ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

2005ರಿಂದ ಬಾಬ್ರಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಎಸ್​.ಕೆ. ಯಾದವ್​ 2019ರಲ್ಲೇ ತಮ್ಮ ಸೇವೆಯಿಂದ ನಿವೃತ್ತಿ ಹೊಂದಿದ್ದರು. ಆದರೆ ಸುಪ್ರೀಂ ಕೋರ್ಟ್ ಇವರ ಸೇವಾ ಅವಧಿಯನ್ನ ಮುಂದುವರಿಸಿತ್ತು. ಹೀಗಾಗಿ ಬಾಬರಿ ಮಸೀದಿ ಪ್ರಕರಣದಲ್ಲಿ ಬಿಜೆಪಿ ನಾಯಕರಾದ ಎಲ್​.ಕೆ. ಅಡ್ವಾಣಿ , ಮುರಳಿ ಮನೋಹರ ಜೋಷಿ ಸೇರಿದಂತೆ ಹಲವು ನಾಯಕರನ್ನ ಪ್ರಕರಣದಿಂದ ಖುಲಾಸೆಗೊಳಿಸಿದ್ದ ಯಾದವ್​ ತೀರ್ಪು ಪ್ರಕಟಿಸಿದ ದಿನವೇ ನಿವೃತ್ತಿ ಪಡೆದಿದ್ದರು. ಬಾಬರಿ ಮಸೀದಿ ಧ್ವಂಸ ಪ್ರಕರಣ ಅತ್ಯಂತ ಸೂಕ್ಷ್ಮ ಪ್ರಕರಣವಾದ್ದರಿಂದ ತಮಗೆ ಭದ್ರತೆ ಮುಂದುವರಿಸುವಂತೆ ಎಸ್​.ಕೆ. ಯಾದವ್​ ಕೋರ್ಟ್​ಗೆ ಮನವಿ ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...