alex Certify ಕೃಷಿ ಕಾಯ್ದೆಗೆ ಸುಪ್ರೀಂ ತಡೆ ನಡುವೆಯೂ ಟ್ರಾಕ್ಟರ್‌ ಪರೇಡ್‌ ಗೆ ರೈತರ ಸಿದ್ದತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೃಷಿ ಕಾಯ್ದೆಗೆ ಸುಪ್ರೀಂ ತಡೆ ನಡುವೆಯೂ ಟ್ರಾಕ್ಟರ್‌ ಪರೇಡ್‌ ಗೆ ರೈತರ ಸಿದ್ದತೆ

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆಗೆ ತಾತ್ಕಾಲಿಕ ಬ್ರೇಕ್​ ಹಾಕಿರುವ ಸುಪ್ರಿಂ ಕೋರ್ಟ್​ ಕೃಷಿ ಮಸೂದೆ ಬಗ್ಗೆ ಚರ್ಚೆ ನಡೆಸಲು ಸಮಿತಿಯ ಸದಸ್ಯರಾಗುವಂತೆ ರೈತರಿಗೆ ಕೇಳಿದೆ. ಈ ನಡುವೆ ಪ್ರತಿಭಟನಾ ನಿರತ ರೈತರು ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್​ ಪರೇಡ್​ಗೆ ತಯಾರಿ ನಡೆಸಿದ್ದಾರೆ.

ಪಂಜಾಬ್​ನ ಮೊಗಾ ಎಂಬ ಹಳ್ಳಿಯೊಂದರಲ್ಲಿ ಟ್ರ್ಯಾಕ್ಟರ್​ ಪರೇಡ್​​ಗೆ ಟ್ರ್ಯಾಕ್ಟರ್​ ಕಳಿಸಲು ಒಪ್ಪದ ರೈತರಿಗೆ ದಂಡ ವಿಧಿಸೋದಾಗಿ ಘೋಷಣೆ ಮಾಡಲಾಗಿದೆ. ಸುಪ್ರೀಂ ಕೋರ್ಟ್​ ಸೂಚನೆಯ ಹೊರತಾಗಿಯೂ ಈ ಗ್ರಾಮದಿಂದ ಟ್ರ್ಯಾಕ್ಟರ್​ ಹಾಗೂ ಟ್ರಾಲಿಗಳು ಗರಿಷ್ಟ ಸಂಖ್ಯೆಯಲ್ಲಿ ದೆಹಲಿ ತಲುಪಲಿದೆ ಎನ್ನಲಾಗಿದೆ.

ನಮಗೆ ಸುಪ್ರಿಂ ಕೋರ್ಟ್​ನಿಂದ ಯಾವುದೇ ದೊಡ್ಡ ನಿರೀಕ್ಷೆ ಇರಲಿಲ್ಲ. ಕೇಂದ್ರ ಸರ್ಕಾರವೇ ಈ ಕಾನೂನುಗಳನ್ನ ವಾಪಸ್​ ಪಡೆಯಬೇಕು. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ನಮಗೆ ಅಲ್ಪಸ್ವಲ್ಪ ಸಹಾಯ ಮಾಡಬಹುದು. ನಾವು ಯಾವುದೇ ಸಮಿತಿಗೆ ಹೋಗೋದಿಲ್ಲ ಎಂದು ಈಗಾಗಲೇ ಸ್ಪಷ್ಟನೆ ನೀಡಿದ್ದೇವೆ. ಸರ್ಕಾರದ ಪರವಾದ ಸದಸ್ಯರುಳ್ಳ ಸಮಿತಿಯೊಂದಿಗೆ ಚರ್ಚೆ ಮಾಡಲು ನಾವು ಸಿದ್ಧರಿಲ್ಲ. ಹೀಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಕೆಎಂಎಸ್​ಸಿಯ ಪ್ರಧಾನ ಕಾರ್ಯದರ್ಶಿ ಸಾವರ್ನ್​ ಸಿಂಗ್​ ಪಾಂಡರ್​ ಹೇಳಿದ್ದಾರೆ.

ಆದರೆ ಸುಪ್ರಿಂ ಕೋರ್ಟ್​ನ ವಿಚಾರಣೆಯಿಂದಾಗಿ ಸರ್ಕಾರವು ರೈತರ ಬಗ್ಗೆ ಯಾವ ರೀತಿಯ ಅಭಿಪ್ರಾಯ ಹೊಂದಿದೆ ಎಂಬುದು ಮನದಟ್ಟಾಗಿದೆ. ಇದು ಕೃಷಿಕರ ಚಿಂತನೆಯನ್ನ ಇನ್ನಷ್ಟು ಬಲಪಡಿಸಿದೆ. ಟ್ರ್ಯಾಕ್ಟರ್​ ರ್ಯಾಲಿ ಅಂದರೆ ನಾವು ಹಿಂಸಾಚಾರವನ್ನ ಬೆಂಬಲಿಸುತ್ತೇವೆ ಎಂದು ಅರ್ಥವಲ್ಲ. ಈ ಮೆರವಣಿಗೆಯಿಂದ ನಮ್ಮ ಉತ್ಸಾಹ ಇನ್ನಷ್ಟು ಹೆಚ್ಚಲಿದೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...