alex Certify ಅರ್ನಾಬ್‌ ಗೋಸ್ವಾಮಿಗೆ ಎದುರಾಯ್ತು ಸಂಕಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರ್ನಾಬ್‌ ಗೋಸ್ವಾಮಿಗೆ ಎದುರಾಯ್ತು ಸಂಕಷ್ಟ

ಟಿಆರ್‌ಪಿ ರೇಟಿಂಗ್ ವರ್ಧನೆಗಾಗಿ ಅಡ್ಡ ಹಾದಿ ಹಿಡಿಯುತ್ತಿದೆ ಎಂದು ರಿಪಬ್ಲಿಕ್ ಟಿವಿ ಮೇಲೆ ಆರೋಪಪಟ್ಟಿ ದಾಖಲಿಸಿರುವ ಮುಂಬೈ ಪೊಲೀಸರ ವಾದಕ್ಕೆ ಪುಷ್ಠಿ ನೀಡಿರುವ ನಾಲ್ವರು ಸಾಕ್ಷಿಗಳು ಈ ಸಂಬಂಧ ಮ್ಯಾಜಿಸ್ಟ್ರೇಟ್‌ ಎದುರು ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ತಮ್ಮ ಚಾನೆಲ್ಲುಗಳನ್ನು ಸದಾ ಚಾಲನೆಯಲ್ಲಿಟ್ಟರೆ ನಿಮಗೆ ದುಡ್ಡು ಕೊಡುವುದಾಗಿ ಎರಡು ಟಿವಿ ಚಾನೆಲ್‌ಗಳು ತಿಳಿಸಿದ್ದವು ಎಂದು ಈ ನಾಲ್ವರು ತಿಳಿಸಿದ್ದು, ಈ ಪ್ರಕರಣದಲ್ಲಿ ಇವರನ್ನು ಸಾಕ್ಷಿಗಳನ್ನಾಗಿ ಪರಿಗಣಿಸಲಾಗುವುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ರಿಪಬ್ಲಿಕ್ ಚಾನೆಲ್‌ ಜೊತೆಗೆ ಬಾಕ್ಸ್‌ ಸಿನೆಮಾ ಹೆಸರಿನ ಚಾನೆಲ್ ವಿರುದ್ಧವೂ ಸಹ ಟಿಆರ್‌ಪಿ ಕಾಂಡದ ಆಪಾದನೆ ಇದ್ದು, ಈ ಸಂಬಂಧದ ತನಿಖೆ ಮಹತ್ವದ ಘಟ್ಟದಲ್ಲಿರುವ ಕಾರಣ ಈ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಬಿಟ್ಸ್‌ ಕೊಡಲು ಸಾಧ್ಯವಿಲ್ಲ ಎಂದು ಮುಂಬೈ ಪೊಲೀಸ್ ಆಯುಕ್ತ ಪರಂಬೀರ್‌ ಸಿಂಗ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...