
ಪ್ರಿಯಾಂಕ ಗಾಂಧಿ ವಾದ್ರಾ ಫೆಬ್ರವರಿ 7ನೇ ತಾರೀಖಿನಂದು ಬೆಳಗ್ಗೆ 9:08ರ ಸುಮಾರಿಗೆ ಒಂದು ಟ್ವೀಟ್ನ್ನು ಮಾಡಿದ್ದರು ಹಾಗೂ ಹತ್ತೇ ನಿಮಿಷದಲ್ಲಿ ಆ ಟ್ವೀಟ್ನ್ನು ಡಿಲೀಟ್ ಕೂಡ ಮಾಡಿದ್ದಾರೆ. ಈ ಟ್ವೀಟ್ನಲ್ಲಿ ಅವರು ಕೆಲ ಫೋಟೋಗಳನ್ನ ಶೇರ್ ಮಾಡಿದ್ದರು. ಅದರಲ್ಲಿ ಸ್ವಲ್ಪ ಮಂದಿ, ಭಾರತೀಯ ಯೋಧರ ಜೊತೆ ನಿಂತಿದ್ದರು. ಈ ಪೋಸ್ಟ್ನಲ್ಲಿ ಯೋಧನೊಬ್ಬ ತನಗೆ ರಜೆ ಸಿಗುತ್ತಿದ್ದಂತೆಯೇ ತನ್ನ ತಂದೆಯನ್ನ ಭೇಟಿಯಾಗಲು ಸೀದಾ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ಹೇಳಲಾಗಿತ್ತು. ಈ ವಿಚಾರ ಸುಳ್ಳು ಎಂದು ತಿಳಿಯುತ್ತಿದ್ದಂತೆಯೇ ಪ್ರಿಯಾಂಕ ತಮ್ಮ ಪೋಸ್ಟ್ನ್ನು ಡಿಲೀಟ್ ಮಾಡಿದ್ದಾರೆ.
ಅಸಲಿಗೆ ಈ ಫೋಟೋ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ಸ್ಥಳದಲ್ಲಿ ಕ್ಲಿಕ್ಕಿಸಿದ್ದಲ್ಲ. ಬದಲಾಗಿ ಪಂಜಾಬ್ನ ಲೂಧಿಯಾನದಲ್ಲಿ ತೆಗೆದ ಫೋಟೋವಾಗಿದೆ. ಇದೀಗ ಟ್ವಿಟರ್ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಪ್ರಿಯಾಂಕ ಗಾಂಧಿ ಟ್ವಿಟರ್ ಖಾತೆಗೂ ನಿರ್ಬಂಧದ ಶಿಕ್ಷೆ ಸಿಗುತ್ತಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.