alex Certify ಈ ಕಾರಣಕ್ಕೆ ದೀಪಾವಳಿ ಉಡುಗೊರೆ ಕೊಡಬೇಡಿ ಅಂತಿದ್ದಾರೆ ಪಂಜಾಬ್​ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ದೀಪಾವಳಿ ಉಡುಗೊರೆ ಕೊಡಬೇಡಿ ಅಂತಿದ್ದಾರೆ ಪಂಜಾಬ್​ ಪೊಲೀಸರು

ಪಂಜಾಬ್​ ನಗರ ಪೊಲೀಸ್​ ಠಾಣೆ ಮುಖ್ಯಸ್ಥ ಸಂಜೀವ್​ ಕುಮಾರ್​ ಶರ್ಮಾ, ದೀಪಾವಳಿ ಹಬ್ಬದ ಪ್ರಯುಕ್ತ ಯಾವುದೇ ವ್ಯಾಪಾರ ಸಹವರ್ತಿಗಳು ನೀಡುವ ಉಡುಗೊರೆಯನ್ನ ನಮ್ಮ ಪೊಲೀಸರು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

ವಲ್ಲಾ ಪ್ರದೇಶದ ಪೊಲೀಸ್​ ಠಾಣೆ ಗೋಡೆಗೆ ಶರ್ಮಾ ಈ ರೀತಿಯ ನೋಟಿಸ್​ನ್ನ ಅಂಟಿಸಿದ್ದಾರೆ. ಸಾರ್ವಜನಿಕರು ತನಗೆ ಹಾಗೂ ನನ್ನ ಸಿಬ್ಬಂದಿಗೆ ಯಾವುದೇ ದೀಪಾವಳಿ ಉಡುಗೊರೆ ನೀಡಬೇಡಿ ಅಂತಾ ಮನವಿ ಮಾಡಿದ್ದಾರೆ.

ಸಮಾಜಕ್ಕೆ ಸಾಕಷ್ಟು ಧನಸಹಾಯ ಮಾಡಿರುವ ಇನ್ಸ್​ಪೆಕ್ಟರ್​ ಶರ್ಮಾ, ಪೊಲೀಸರಿಗೆ ನೀಡಬೇಕು ಎಂದುಕೊಂಡಿರುವ ಉಡುಗೊರೆಗಳನ್ನ ಬಡವರಿಗೆ ನೀಡಿ ಅಂತಾ ಕೇಳಿಕೊಂಡಿದ್ದಾರೆ.

ನನ್ನ ಸಿಬ್ಬಂದಿ ಈ ಬಾರಿ ಯಾವುದೇ ಕಾರಣಕ್ಕೂ ದೀಪಾವಳಿ ಉಡುಗೊರೆ ಸ್ವೀಕರಿಸೋಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೇ ಹಬ್ಬದ ದಿನದಂದು ಬಡವರಿಗಾಗಿ ನಮ್ಮ ಸಿಬ್ಬಂದಿ ಹಾಗೂ ನಾನು ಸಮುದಾಯ ಅಡುಗೆ ಮನೆ ನಡೆಸಲಿದ್ದೇವೆ. ಈ ಮೂಲಕ ನಿರಾಶ್ರಿತರಿಗೆ ಊಟ ನೀಡಲಿದ್ದೇವೆ ಅಂತಾ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...