alex Certify ಜೇಬಿನಲ್ಲಿ ನಯಾಪೈಸೆ ಇಟ್ಟುಕೊಳ್ಳೋದಿಲ್ಲವಂತೆ ಈ ʼಶ್ರೀಮಂತʼ ಉದ್ಯಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೇಬಿನಲ್ಲಿ ನಯಾಪೈಸೆ ಇಟ್ಟುಕೊಳ್ಳೋದಿಲ್ಲವಂತೆ ಈ ʼಶ್ರೀಮಂತʼ ಉದ್ಯಮಿ

ರಿಲಯೆನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ. ಅಲ್ಲದೇ ಇದೀಗ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಅವರ ಬಳಿ ಹಣಕ್ಕೇನೂ ಬರವಿಲ್ಲ. ಆದ್ರೆ ಅವರು ಜೇಬಿನಲ್ಲಿ ನಯಾಪೈಸೆ ಇಟ್ಟುಕೊಳ್ಳುವುದಿಲ್ಲವಂತೆ. ಈ ಸಿರಿವಂತ ಉದ್ಯಮಿ ಬಳಿ ಕ್ರೆಡಿಟ್ ಕಾರ್ಡ್ ಕೂಡ ಇಲ್ಲ ಅಂದ್ರೆ ನೀವು ನಂಬಲೇಬೇಕು.

ಅರ್ಜೆಂಟಾಗಿ ಎಲ್ಲಾದ್ರೂ ಹಣ ಪಾವತಿಸಬೇಕಾಗಿ ಬಂದ್ರೆ ಜೊತೆಗಿರುವ ಸ್ನೇಹಿತರು, ಪರಿಚಯಸ್ಥರು ಕೊಡ್ತಾರಂತೆ. ಹಾಗಾಗಿ ಜೇಬಿನಲ್ಲಿ ಹಣ ಇಟ್ಟುಕೊಳ್ಳುವ ಅನಿವಾರ್ಯತೆಯೇ ಬಂದಿಲ್ಲ ಎನ್ನುತ್ತಾರೆ ಮುಕೇಶ್ ಅಂಬಾನಿ.

ಹಣ ಅತ್ಯಂತ ಮುಖ್ಯವೆಂದು ನನಗನಿಸಿಯೇ ಇಲ್ಲ, ಆದ್ರೆ ಇದೊಂದು ಸಂಪನ್ಮೂಲವಾಗಿರೋದ್ರಿಂದ ಕಂಪನಿ ಹೆಚ್ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಹಕಾರಿಯಾಗಿದೆ. ಹಣಕ್ಕಿಂತ ಗೌರವ ಮತ್ತು ಪ್ರತಿಷ್ಠೆಯೇ ಮುಖ್ಯ ಅಂತಾ ಮುಕೇಶ್ ಅಂಬಾನಿ ಸಮಾರಂಭವೊಂದರಲ್ಲಿ ಹೇಳಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Her er det Hvor er de 9 Smarte Tip fra Bedstemor til at Fjerne Fejl i parken: Hvordan vælger du kaffebønner: 3