alex Certify ಪಾಲಿಕೆ ನಿರ್ಲಕ್ಷ್ಯ ಖಂಡಿಸಿ ನಡುರಸ್ತೆಯಲ್ಲೇ ಅಡುಗೆ ತಯಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಲಿಕೆ ನಿರ್ಲಕ್ಷ್ಯ ಖಂಡಿಸಿ ನಡುರಸ್ತೆಯಲ್ಲೇ ಅಡುಗೆ ತಯಾರಿ

ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಸಿಗದೇ ಹೈರಾಣಾಗಿರುವ ಲಖನೌ ನಿವಾಸಿಯೊಬ್ಬರು ವಿನೂತನ ರೀತಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಆಶುತೋಶ್ ಸಿಂಗ್ ಹೆಸರಿನ ಈ ವ್ಯಕ್ತಿ ಬಾರ್ಬೆಕ್ಯೂ ಗ್ರಿಲ್ ಒಂದನ್ನು ಸ್ಥಾಪಿಸಿ ಕಲ್ಲಿದ್ದಲಿನ ಬದಲಿಗೆ ತ್ಯಾಜ್ಯವನ್ನೇ ಇಂಧನದ ರೂಪದಲ್ಲಿ ಬಳಸಿಕೊಂಡಿದ್ದಾರೆ.

ಲಖನೌದ ಇಂದಿರಾ ನಗರದ ಪ್ರದೇಶದಲ್ಲಿ ಕಸದ ರಾಶಿ ಬೆಟ್ಟದಂತೆ ಬೆಳೆದರೂ ಸಹ ಪಾಲಿಕೆ ಸಿಬ್ಬಂದಿ ಈ ಬಗ್ಗೆ ಗಮನ ಹರಿಸದೇ ಇದ್ದ ಕಾರಣದಿಂದ ಬೇಸತ್ತು ಹೋಗಿದ್ದರು ಆಶುತೋಶ್‌. ಬಾರ್ಬೆಕ್ಯೂ ಹಾಕಿಕೊಂಡು ಅದರ ಮೇಲೆ ಚೀಸ್‌ ಹಾಗೂ ತರಕಾರಿ ಬೇಯಿಸಿಕೊಂಡು, ಚಹಾ ಮಾಡಿ ಸ್ನೇಹಿತರಿಗೆ ಹಂಚಿದ್ದಾರೆ ಆಶುತೋಶ್‌.

ಆಶುತೋಶ್‌ಗೆ ಬೆಂಬಲ ಕೊಟ್ಟ ಸ್ಥಳೀಯ ಮಂದಿ, ಪಾಲಿಕೆ ಸಿಬ್ಬಂದಿ ಈ ಬಗ್ಗೆ ಗಮನ ಹರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಇದೇ ರೀತಿ ಪ್ರತಿಭಟನೆಗಳು ಇನ್ನಷ್ಟು ಹೆಚ್ಚಾಗಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಸ್ಪಂದಿಸಿದ ಪಾಲಿಕೆಯ ವಲಯಾಧಿಕಾರಿ ವಿದ್ಯಾ ಸಾಗರ್‌ ಯಾದವ್‌, ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...