alex Certify ಚುನಾವಣೆಗಾಗಿ ಧರ್ಮವನ್ನು ಬಳಸಬೇಡಿ ಎಂದ ಟಿಎಂಸಿ ಸಂಸದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚುನಾವಣೆಗಾಗಿ ಧರ್ಮವನ್ನು ಬಳಸಬೇಡಿ ಎಂದ ಟಿಎಂಸಿ ಸಂಸದೆ

ತೃಣಮೂಲ ಕಾಂಗ್ರೆಸ್​ ಸಂಸದೆ ನುಸ್ರತ್​ ಜಹಾನ್​​ ಪ್ರೀತಿ ಹಾಗೂ ಜಿಹಾದ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನೀವು ಯಾರೊಂದಿಗೆ ಇರಬೇಕು ಎಂದು ಬಯಸುತ್ತಿರೋ ಅದು ಅವರ ವೈಯಕ್ತಿಕ ವಿಚಾರವಾಗಿದೆ. ಚುನಾವಣೆಗಾಗಿ ಧರ್ಮವನ್ನ ರಾಜಕೀಯ ಸಾಧನವಾಗಿ ಬಳಸುವುದು ತಪ್ಪು ಎಂದು ಅವರು ಹೇಳಿದ್ದಾರೆ.

ಪ್ರೀತಿ ಅನ್ನೋದು ತುಂಬಾ ವೈಯಕ್ತಿಕ ವಿಚಾರ, ಪ್ರೀತಿ ಹಾಗೂ ಜಿಹಾದ್​ ಪರಸ್ಪರ ಕೈ ಜೋಡಿಸುವುದಿಲ್ಲ. ಆದರೆ ನೀವು ಯಾರೊಂದಿಗೆ ಇರುತ್ತೀರಿ ಅನ್ನೋದು ವೈಯಕ್ತಿಕ ಆಯ್ಕೆಯಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ಲವ್​ ಜಿಹಾದ್​ನ್ನ ಗಂಭೀರ ಸಮಸ್ಯೆ ಎಂದು ಹೇಳಿದೆ. ಅಲ್ಲದೇ ಅದರ ವಿರುದ್ಧ ಕಾನೂನನ್ನ ತರೋಕೆ ಬಿಜೆಪಿ ಆಡಳಿತವಿರುವ ಅನೇಕ ರಾಜ್ಯಗಳು ಮುಂದಾಗಿದೆ. ಆದರೆ ಇದು ಸಮಾಜವನ್ನ ವಿಭಜಿಸುವ ಕೆಲಸವಾಗಿದೆ ಅಂತಾ ನುಸ್ರತ್​ ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...