alex Certify ಭಾರತೀಯರ ಕಾಯಿ ತುರಿಯುವ ಪರಿಗೆ ವಿದೇಶಿಗನ ಅಚ್ಚರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯರ ಕಾಯಿ ತುರಿಯುವ ಪರಿಗೆ ವಿದೇಶಿಗನ ಅಚ್ಚರಿ

ಮಸಾಲೆಯುಕ್ತ ಆಹಾರ ಪದಾರ್ಥಗಳಿಗೆ ಭಾರತ ಹೆಸರುವಾಸಿ. ಅದರಲ್ಲೂ ದಕ್ಷಿಣ ಭಾರತದಲ್ಲಿ ಮಸಾಲೆ ಪದಾರ್ಥಗಳಿಲ್ಲದೇ ಅಡುಗೆಯೇ ಆಗೋದಿಲ್ಲ. ದಕ್ಷಿಣ ಭಾರತದ ಅಡುಗೆ ತಯಾರು ಮಾಡುವ ವಿಧಾನ ನಮಗೆಲ್ಲ ವಿಶೇಷ ಎನಿಸಲ್ಲ. ಆದರೆ ಅಂತಾರಾಷ್ಟ್ರೀಯ ಶೆಫ್​ ಗೊರ್ಡೋನ್​ ರಾಮ್ಸೇ ದಕ್ಷಿಣ ಭಾರತದ ಅಡುಗೆ ತಯಾರು ಮಾಡುವ ವಿಧಾನ ಕಂಡು ಆಶ್ಚರ್ಯ ಹೊರಹಾಕಿದ್ದಾರೆ.

ನ್ಯಾಷನಲ್​ ಜಿಯಾಗ್ರಾಫಿಕ್​​ ಟ್ವಿಟರ್​​ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋ ತುಣುಕಿನಲ್ಲಿ ಗೊರ್ಡೋನ್​​ ದಕ್ಷಿಣ ಭಾರತದ ಮನೆಯೊಂದಕ್ಕೆ ಭೇಟಿ ನೀಡಿರೋದನ್ನ ಕಾಣಬಹುದಾಗಿದೆ.

ಭಾರತೀಯ ಖಾದ್ಯ ತಿಂದ ಗೊರ್ಡೋನ್​​ ಮಸಾಲೆ ಜಾಸ್ತಿಯಾದ ಹಿನ್ನೆಲೆ ನೀರು ಬೇಕೆಂದು ಹೇಳುತ್ತಾರೆ. ಕೂಡಲೇ ಅಲ್ಲಿದ್ದ ಮಹಿಳೆಯೊಬ್ಬರು ಅಡುಗೆಯಲ್ಲಿ ಮಸಾಲೆ ಜಾಸ್ತಿಯಾದರೆ ಅದನ್ನ ಕಡಿಮೆ ಮಾಡೋಕೆ ಒಂದು ಮಾರ್ಗವಿದೆ ಎಂದು ಹೇಳುತ್ತಾಳೆ. ತೆಂಗಿನ ಕಾಯಿ ತುರಿದು ಹಾಕಿದ್ರೆ ಅಡುಗೆಯ ಖಾರದ ಅಂಶ ಕಡಿಮೆಯಾಗುತ್ತೆ ಎಂದು ವಿವರಿಸುತ್ತಾಳೆ. ಆದರೆ ಕಾಯಿ ಮಣೆಯಲ್ಲಿ ಕಾಯಿ ತುರಿಯೋದನ್ನ ನೋಡಿ ಆಶ್ಚರ್ಯ ಹೊರಹಾಕಿದ ಗೊರ್ಡೋನ್ಸ್ ಇದೊಂದು ವಿಚಿತ್ರವಾದ ಯೋಗದ ಭಂಗಿ ಎಂದು ಹೇಳಿದ್ದಾರೆ.

ಗೊರ್ಡೋನ್​ ರಾಮ್ಸೆ ಭಾರತ ಹಾಗೂ ಇಲ್ಲಿನ ಸಂಸ್ಕೃತಿಯ ಅಭಿಮಾನಿಯಾಗಿರೋದ್ರಿಂದ ಭಾರತದಲ್ಲಿ ರೆಸ್ಟಾರೆಂಟ್​ ಒಂದನ್ನ ತೆರೆಯಬಯಸುತ್ತೇನೆ ಎಂದು ಈ ಹಿಂದೆ ಹಲವು ಭಾರೀ ಹೇಳಿದ್ದಾರೆ.

— Nat Geo India (@NatGeoIndia) November 28, 2020

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kouzlo vody: Jak udělat z akvária skvělou dekoraci Чешский язык: Тест на IQ: найдите 3 стрелки за Co se stane, když kočku zataháte Originální recept