alex Certify ಯೋಧರ ಸುರಕ್ಷತೆ ಕೇಳಿದ್ದೇ ತಪ್ಪಾ ಎಂದು ಪ್ರಶ್ನಿಸಿದ ಕಾಂಗ್ರೆಸ್ ನಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯೋಧರ ಸುರಕ್ಷತೆ ಕೇಳಿದ್ದೇ ತಪ್ಪಾ ಎಂದು ಪ್ರಶ್ನಿಸಿದ ಕಾಂಗ್ರೆಸ್ ನಾಯಕ

Is Cong Supposed to Apologise for Expecting Safety of Soldiers?' Tharoor Hits Back at BJP Over Pulwama

2019ರಲ್ಲಿ ನಡೆದ ಪುಲ್ವಾಮಾ ದಾಳಿ ವಿಚಾರವಾಗಿ ಕಾಂಗ್ರೆಸ್​ ನಾಯಕರು ನಮ್ಮ ಬಳಿ ಕ್ಷಮೆ ಯಾಚಿಸಬೇಕು ಎಂಬ ಬಿಜೆಪಿಗರ ಆಗ್ರಹವನ್ನ ಕಾಂಗ್ರೆಸ್​ ಹಿರಿಯ ಮುಖಂಡ ಶಶಿ ತರೂರ್​ ತಳ್ಳಿ ಹಾಕಿದ್ದಾರೆ.

ಮೋದಿ ಸರ್ಕಾರ ನಮ್ಮ ದೇಶದ ಸೈನಿಕರನ್ನ ಸುರಕ್ಷಿತವಾಗಿ ನೋಡಿಕೊಳ್ಳುತ್ತೆ ಎಂದು ನಿರೀಕ್ಷಿಸಿದ ತಪ್ಪಿಗೆ ಕಾಂಗ್ರೆಸ್​ ನಿಮ್ಮ ಬಳಿ ಕ್ಷಮೆ ಯಾಚಿಸಬೇಕೇ ಅಂತಾ ವ್ಯಂಗ್ಯವಾಗಿ ಟ್ವೀಟ್​ ಮಾಡಿದ್ದಾರೆ.

ಕಾಂಗ್ರೆಸ್​ ಬಿಜೆಪಿ ಬಳಿ ಯಾವ ವಿಚಾರಕ್ಕೆ ಕ್ಷಮೆಯಾಚನೆ ಮಾಡಬೇಕು ಅನ್ನೋದನ್ನ ಕಂಡು ಹಿಡಿಯಲು ನಾನಿನ್ನೂ ಪ್ರಯತ್ನಿಸುತ್ತಲೇ ಇದ್ದೇನೆ. ನಮ್ಮ ಸೈನಿಕರನ್ನ ನೀವು ಸುರಕ್ಷಿತವಾಗಿ ಇಟ್ಟುಕೊಳ್ತಿರಿ ಎಂದು ನಿರೀಕ್ಷಿಸಿದ್ದಕ್ಕಾ..? ನಮ್ಮ ಹುತಾತ್ಮರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಕ್ಕಾ? ಈ ದುರಂತವನ್ನ ರಾಜಕೀರಣಗೊಳಿಸದೇ ರ್ಯಾಲಿ ನಡೆಸಿದ್ದಕ್ಕಾ..? ಅಂತಾ ಟ್ವಿಟರ್​ನಲ್ಲಿ ವ್ಯಂಗ್ಯವಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...