alex Certify ಈ ಕಾರಣಕ್ಕೆ ಸಮವಸ್ತ್ರ ಬಿಟ್ಟು ಯಮರಾಜನಾದ ಪೊಲೀಸ್​ ಅಧಿಕಾರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಸಮವಸ್ತ್ರ ಬಿಟ್ಟು ಯಮರಾಜನಾದ ಪೊಲೀಸ್​ ಅಧಿಕಾರಿ….!

ಕೊರೊನಾ ವಿಶ್ವಕ್ಕೆ ಬಂದು ಅಪ್ಪಳಿಸಿದಾಗಿನಿಂದಲೂ ಜನರನ್ನ ಸೋಂಕಿನಿಂದ ಕಾಪಾಡೋಕೆ ಆರೋಗ್ಯ ಸಿಬ್ಬಂದಿ ಯಾವ ರೀತಿ ಶ್ರಮಿಸ್ತಾ ಇದ್ದಾರೆಯೋ ಅದೇ ರೀತಿ ಪೊಲೀಸರು ಕೂಡ ಸಿಕ್ಕಾಪಟ್ಟೆ ಶ್ರಮ ವಹಿಸಿದ್ದಾರೆ. ಭಾರತದಲ್ಲೂ ಕೂಡ ಲಾಕ್​ಡೌನ್ ಕಾಲದಿಂದ ಇಲ್ಲಿಯವರೆಗೂ ಪೊಲೀಸರು ವಹಿಸಿದ ಶ್ರಮವನ್ನ ನಾವು ಕಡೆಗಣಿಸುವಂತಿಲ್ಲ.

ಇಷ್ಟು ದಿನ ಕೊರೊನಾ ವಿರುದ್ಧದ ಜಾಗೃತಿಗಾಗಿ ವಿವಿಧ ಪೋಷಾಕುಗಳ ಮೂಲಕ ಜನರಿಗೆ ಮಾಹಿತಿ ನೀಡುತ್ತಿದ್ದ ಪೊಲೀಸರು ಇದೀಗ ಲಸಿಕೆ ಬಗ್ಗೆಯೂ ವಿಶೇಷ ಜಾಗೃತಿಗೆ ಮುಂದಾಗಿದ್ದಾರೆ. ಮಧ್ಯ ಪ್ರದೇಶದ ಇಂದೋರ್​​ನಲ್ಲಿ ಕೊರೊನಾ ಲಸಿಕೆ ಪಡೆಯುವ ವೇಳೆ ಪೊಲೀಸ್​ ಅಧಿಕಾರಿಯೊಬ್ಬರು ಯಮರಾಜನ ವೇಷದಲ್ಲಿ ಬಂದು ಎಲ್ಲರ ಗಮನ ಸೆಳೆದಿದ್ದಾರೆ.

ವಿಮೆ ದಾಖಲೆಗಳ ಬಗ್ಗೆ ಇನ್ಮುಂದೆ ಚಿಂತೆ ಬೇಡ…! ಇಲ್ಲಿ ಸುರಕ್ಷಿತವಾಗಿರಲಿದೆ ಕಾಗದಪತ್ರ

ಕೊರೊನಾ ವೈರಸ್​ ವಿರುದ್ಧದ ಜಾಗೃತಿಗಾಗಿ ಪೊಲೀಸರು ಯಮರಾಜನ ವೇಷ ಧರಿಸಿದ್ದು ಇದೇ ಮೊದಲೇನಲ್ಲ. ಕಳೆದ ವರ್ಷ ಏಪ್ರಿಲ್​ನಲ್ಲಿ ಲಾಕ್​ಡೌನ್​ ಅವಧಿ ಜಾರಿಯಲ್ಲಿದ್ದ ವೇಳೆ ಬೆಂಗಳೂರು ಪೊಲೀಸರೊಬ್ಬರು ಯಮರಾಜನ ವೇಷ ಧರಿಸಿ ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಿದ್ದರು.

— ANI (@ANI) February 11, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...