alex Certify ‘ನಿಮ್ಮಿಂದ ಹಿಂದುತ್ವದ ಸರ್ಟಿಫಿಕೇಟ್​ ಬೇಕಿಲ್ಲ’: ರಾಜ್ಯಪಾಲರಿಗೆ ಉದ್ಧವ್​ ಠಾಕ್ರೆ ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನಿಮ್ಮಿಂದ ಹಿಂದುತ್ವದ ಸರ್ಟಿಫಿಕೇಟ್​ ಬೇಕಿಲ್ಲ’: ರಾಜ್ಯಪಾಲರಿಗೆ ಉದ್ಧವ್​ ಠಾಕ್ರೆ ತಿರುಗೇಟು

ಮಹಾರಾಷ್ಟ್ರದಲ್ಲಿ ದೇವಾಲಯಗಳ ಪುನಾರಂಭ ಸಂಬಂಧ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹಾಗೂ ರಾಜ್ಯಪಾಲ ಭಗತ್​ ಸಿಂಗ್​​ ಕೋಶಿಯಾರಿ ನಡುವಿನ ವಾಕ್ಸಮರ ಮುಗಿಯೋವಂತೆ ಕಾಣುತ್ತಿಲ್ಲ. ಕೊರೊನಾ ಸಂದರ್ಭದಲ್ಲಿ ಬಂದ್​ ಮಾಡಲಾಗಿದ್ದ ದೇವಾಲಯಗಳ ಬಾಗಿಲು ತೆರೆಯುವ ಸಂಬಂಧ ರಾಜ್ಯಪಾಲರು ಕಳುಹಿಸಿದ್ದ ಪತ್ರಕ್ಕೆ ಉದ್ಧವ್ ಠಾಕ್ರೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆಗೆ ಪತ್ರ ಬರೆದಿದ್ದ ರಾಜ್ಯಪಾಲ ಕೋಶಿಯಾರಿ, ಕೊರೊನಾ ನಡುವೆಯೂ ನೀವು ಬಾರ್​ ಹಾಗೂ ರೆಸ್ಟೋರೆಂಟ್​​ಗಳನ್ನ ಓಪನ್​ ಮಾಡಿದ್ದೀರಾ. ಆದರೆ ದೇವಾಲಯಗಳನ್ನ ತೆರೆಯುದಕ್ಕೆ ಮಾತ್ರ ನಿರ್ಬಂಧ ಹೇರಿದ್ದೀರಾ. ಸದಾ ಹಿಂದೂತ್ವದ ಬಗ್ಗೆ ಮಾತನಾಡೋ ನೀವು ಇದೀಗ ಜಾತ್ಯಾತೀತರಾದ್ರಾ ಎಂದು ಪ್ರಶ್ನೆ ಮಾಡಿದ್ದರು.

ರಾಜ್ಯಪಾಲರ ಪ್ರಶ್ನೆಗೆ ಖಾರವಾಗಿ ಪ್ರತ್ಯುತ್ತರ ನೀಡಿದ ಉದ್ಧವ್​ ಠಾಕ್ರೆ, ಪತ್ರದ ಮೂಲಕ ನೀವು ನನ್ನ ಹಿಂದೂತ್ವವನ್ನ ಪ್ರಶ್ನೆ ಮಾಡಿದ್ದೀರಾ. ಆದರೆ ನನಗೆ ನಿಮ್ಮಿಂದ ಹಿಂದೂತ್ವದ ಪ್ರಮಾಣ ಪತ್ರ ಬೇಕಿಲ್ಲ. ಮಹಾರಾಷ್ಟ್ರವನ್ನ ಪಾಕ್​ಗೆ ಹೋಲಿಸಿದವರನ್ನ ನೀವು ಮನೆಗೆ ಆಹ್ವಾನಿಸುತ್ತೀರಾ. ಆದರೆ ಅದು ನನ್ನ ಹಿಂದೂತ್ವದ ಚಿಂತನೆಯಲ್ಲ ಅಂತಾ ಟಾಂಗ್​ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...