alex Certify ರೈತರಿಗಾಗಿ ಬೆಂಜ್​ ಕಾರನ್ನ ಬಿಟ್ಟು ಟ್ರಾಕ್ಟರ್​ ಏರಿದ ಮದುಮಗ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗಾಗಿ ಬೆಂಜ್​ ಕಾರನ್ನ ಬಿಟ್ಟು ಟ್ರಾಕ್ಟರ್​ ಏರಿದ ಮದುಮಗ..!

ಕೇಂದ್ರ ಸರ್ಕಾರದ ಕೃಷಿ ಕಾನೂನನ್ನ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ದೇಶ ಮಾತ್ರವಲ್ಲದೇ ವಿದೇಶಗಳಿಂದಲೂ ಬೆಂಬಲದ ಮಹಾಪೂರವೇ ಹರಿದು ಬರ್ತಿದೆ.

ಇದೀಗ ವಿಶೇಷ ರೀತಿಯಲ್ಲಿ ರೈತರ ಹೋರಾಟಕ್ಕೆ ಬೆಂಬಲ ನೀಡಲು ಮುಂದಾದ ಹರಿಯಾಣ ರಾಜ್ಯದ ಕರ್ನಲ್​ನ ಯುವಕನೊಬ್ಬ ಮದುವೆಗೆ ಮಂಟಪಕ್ಕೆ ಅಲಂಕಾರಗೊಂಡ ಕಾರಿನಲ್ಲಿ ತೆರಳುವ ಬದಲು ಟ್ರ್ಯಾಕ್ಟರ್​ನಲ್ಲಿ ತೆರಳುವ ಮೂಲಕ ರೈತರೊಂದಿಗೆ ನಾನಿದ್ದೇನೆ ಎಂಬ ಸಂದೇಶ ಸಾರಿದ್ದಾನೆ.

ಸೆಕ್ಟರ್ 6 ಕರ್ನಲ್​ ನಿವಾಸಿ ಸುಮಿತ್​ ಧುಲ್​ ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನ ಬೆಂಬಲಿಸುವ ಸಲುವಾಗಿ ತಮ್ಮ ಮದುವೆ ದಿನದಂದು ಟ್ರ್ಯಾಕ್ಟರ್ ಚಲಾಯಿಸಿದ್ದಾರೆ.​

ತನ್ನ ಅಲಂಕೃತ ಮರ್ಸಿಡಿಸ್​ ಬೆಂಜ್​​ ಕಾರನ್ನ ಬಿಟ್ಟು ಟ್ರ್ಯಾಕ್ಟರ್​ನಲ್ಲೇಕೆ ಬಂದ್ರಿ ಎಂದು ಕೇಳಿದ್ರೆ, ನಾನು ರೈತ ಕುಟುಂಬಕ್ಕೆ ಸೇರಿದವನು. ಹೀಗಾಗಿ ರೈತರಿಗೆ ನನ್ನ ಬೆಂಬಲ ಎಂದು ಹೇಳಿದ್ದಾರೆ.

— ANI (@ANI) December 4, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...