alex Certify Big News: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜನಸಾಮಾನ್ಯರ ನೆರವಿಗೆ ನಿಂತ ಸೆಲೆಬ್ರಿಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜನಸಾಮಾನ್ಯರ ನೆರವಿಗೆ ನಿಂತ ಸೆಲೆಬ್ರಿಟಿ

ದೇಶದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆಸ್ಪತ್ರೆಗಳಲ್ಲಿ ಬೆಡ್​, ಔಷಧಿ ಹಾಗೂ ಲಸಿಕೆಗಳ ಕೊರತೆ ಉಂಟಾಗ್ತಿದೆ. ಈ ಬಗ್ಗೆ ಕೆಲ ಪ್ರಜ್ಞಾವಂತ ನಾಗರಿಕರು ಸೋಶಿಯಲ್​ ಮೀಡಿಯಾ ಮೂಲಕ ಕೊರೊನಾ ರೋಗಿಗಳಿಗೆ ಬೇಕಾದ ಅವಶ್ಯ ವಸ್ತುಗಳನ್ನ ಪೂರೈಸಲು ನೆರವಾಗುತ್ತಿದ್ದಾರೆ. ಮಾತ್ರವಲ್ಲದೇ ಕೊರೊನಾ ವಿರುದ್ಧವೂ ಜಾಗೃತಿ ಮೂಡಿಸ್ತಾ ಇದಾರೆ.

ಪ್ಲಾಸ್ಮಾ ದಾನಿಗಳನ್ನ ಸಂಪರ್ಕಿಸೋದು, ರೆಮಿಡಿಸಿವರ್​ ಚುಚ್ಚುಮದ್ದು, ಆಂಬುಲೆನ್ಸ್​ ಸೇವೆ ಹೀಗೆ ಕೊರೊನಾ ಸೋಂಕಿತರಿಗೆ ಅವಶ್ಯವಿರುವ ವಸ್ತುಗಳನ್ನ ತಲುಪಿಸೋಕೆ ರಾಜಕಾರಣಿಗಳು, ಸೆಲೆಬ್ರಿಟಿಗಳು, ಸೋಶಿಯಲ್​ ಮೀಡಿಯಾ ಸ್ಟಾರ್ಸ್ ಹಾಗೂ ಸಾಮಾನ್ಯ ಜನತೆ ಸಾಮಾಜಿಕ ಜಾಲತಾಣವನ್ನ ಬಳಕೆ ಮಾಡುತ್ತಿದ್ದಾರೆ.

ಬಾಲಿವುಡ್​ ನಟ ಸೋನು ಸೂದ್​, ಕಮಿಡೀಯನ್​ ಅಪೂರ್ವ್​ ಗುಪ್ತಾ ಟ್ವಿಟರ್​ನ ಸಹಾಯದಿಂದ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಸೋನು ಸೂದ್​ ಆಸ್ಪತ್ರೆಗಳಲ್ಲಿ ಬೆಡ್​, ಇಂಜೆಕ್ಷನ್​, ಮೆಡಿಸಿನ್​ಗಾಗಿ ಫೋನ್​ಗಳ ಸುರಿಮಳೆಯೇ ಬರ್ತಿದೆ. ಆದರೆ ಎಲ್ಲರಿಗೂ ಸಹಾಯ ಮಾಡಲಾಗದ್ದಕ್ಕೆ ಬೇಸರವಿದೆ ಎಂದಿದ್ದಾರೆ.

ಬೆಳಗ್ಗೆಯಿಂದ ನಾನು ಫೋನ್​ನ್ನು ಕೆಳಗೆ ಇಟ್ಟಿಲ್ಲ. ಆಸ್ಪತ್ರೆ ಬೆಡ್​, ಮೆಡಿಸಿನ್​, ಇಂಜೆಕ್ಷನ್​​ಗಾಗಿ ಸಾವಿರಗಟ್ಟಲೇ ಫೋನ್​ ಬರ್ತಾನೆ ಇರುತ್ತೆ. ಆದರೆ ಎಲ್ಲರಿಗೂ ಅವಶ್ಯವಿರುವ ವಸ್ತುಗಳನ್ನ ಪೂರೈಸಲು ಸಾಧ್ಯವಾಗ್ತಿಲ್ಲ. ಪರಿಸ್ಥಿತಿ ತುಂಬಾನೇ ಗಂಭೀರವಾಗಿದೆ. ಹೀಗಾಗಿ ಆದಷ್ಟು ಮನೆಯಲ್ಲೇ ಇರಿ. ಮಾಸ್ಕ್​​ಗಳನ್ನ ಧರಿಸಿ ಹಾಗೂ ನಿಮ್ಮನ್ನ ನೀವು ಸೋಂಕಿನಿಂದ ಪಾರು ಮಾಡಿಕೊಳ್ಳಿ ಎಂದು ಸೋನು ಸೂದ್​ ಟ್ವಿಟರ್​ನಲ್ಲಿ ಬರೆದಿದ್ದಾರೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,34,692 ಕೊರೊನಾ ಸೋಂಕು ವರದಿಯಾಗಿದೆ. ಹಾಗೂ ಒಂದೇ ದಿನದಲ್ಲಿ 1341 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,45,26,609 ಹಾಗೂ ಸಾವಿನ ಸಂಖ್ಯೆ 1,75,649 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

https://twitter.com/Chatterj1Asking/status/1382861385466474501

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...