alex Certify ಕೆಂಪು ಕೋಟೆ ಬಳಿ ನಡೆದ ಹಿಂಸಾಚಾರಕ್ಕೆ ಕಾರಣನಾದ ದೀಪ್‌ ಸಿಧು ಹಿನ್ನಲೆ ಏನು…? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಂಪು ಕೋಟೆ ಬಳಿ ನಡೆದ ಹಿಂಸಾಚಾರಕ್ಕೆ ಕಾರಣನಾದ ದೀಪ್‌ ಸಿಧು ಹಿನ್ನಲೆ ಏನು…? ಇಲ್ಲಿದೆ ಮಾಹಿತಿ

ಗಣರಾಜ್ಯೋತ್ಸವ ದಿನದಂದು ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಿರುಗಲು ಕಾರಣ ಪಂಜಾಬಿ ಗಾಯಕ ಹಾಗೂ ನಟ ದೀಪ್​ ಸಿಧು ಎಂದು ಆರೋಪಿಸಲಾಗಿದೆ. ನಿನ್ನೆ ದೆಹಲಿಯ ಕೆಂಪುಕೋಟೆಯಲ್ಲಿ  ಸಿಖ್​ ಧರ್ಮದ ನಿಶಾನ್​ ಸಾಹಿಬ್​ ಆರೋಹಣ ಮಾಡುವ ಮೂಲಕ ದೇಶದ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ದೆಹಲಿಯ ಕೆಂಪು ಕೋಟೆಯಲ್ಲಿ ನಾವು ನಡೆಸುತ್ತಿದ್ದ ಆಂದೋಲನಕ್ಕೆ ದೀಪ್​ ಸಿಧು ಬೇರೆಯ ಬಣ್ಣವನ್ನೇ ನೀಡಿದ್ದಾರೆ. ನಮ್ಮ ಆಂದೋಲನವನ್ನ ಸಿಧು ಹಿಂಸಾಚಾರಕ್ಕೆ ತಿರುಗಿಸಿದ್ದಾರೆ. ಆದರೆ ಸಿಧು ಯಾರ ಪರವಾಗಿ ಈ ಕೆಲಸ ಮಾಡಿದ್ದಾರೆ ಅನ್ನೋದೇ ನಮಗೆ ತಿಳಿದಿಲ್ಲ ಎಂದು ಭಾರತೀಯ ಕಿಸಾನ್​ ಸಂಘದ ಜೋಗಿಂದರ್​ ಸಿಂಗ್​ ಉಗ್ರಾಹನ್​ ಹೇಳಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ವಿಡಿಯೋಗಳಲ್ಲಿ ದೀಪ್​ ಸಿಧು ಖಲ್ಸಾ ಧ್ವಜವನ್ನ ಹಿಡಿದು ನಿಂತಿರೋದು ಹಾಗೂ ಕೆಂಪು ಕೋಟೆಯಲ್ಲಿ ಮಜದೂರ್​ ಏಕ್ತಾ ಎಂದು ಘೋಷಣೆ ಕೂಗುತ್ತಿರೋದನ್ನ ಕಾಣಬಹುದಾಗಿದೆ.

ಅಮೆರಿಕದಲ್ಲೂ ಪ್ರತಿಧ್ವನಿಸಿದ ಭಾರತದ ರೈತ ಹೋರಾಟ: ರಾಯಭಾರ ಕಚೇರಿ ಎದುರು ‘ಖಲಿಸ್ತಾನ್’ ಗುಂಪುಗಳ ಪ್ರತಿಭಟನೆ

ದೆಹಲಿಯ ರೈತರ ಆಂದೋಲನ ಹಿಂಸಾಚಾರ ರೂಪಕ್ಕೆ ತಿರುಗುತ್ತಿದ್ದಂತೆಯೇ ರೈತ ಸಂಘಟನೆಗಳು ನಮಗೂ ಹಿಂಸಾಚಾರ ನಡೆಸಲು ಪ್ರಮುಖ ಕಾರಣನಾದ ದೀಪ್ ಸಿಧುಗೂ ಯಾವುದೇ ಪರಿಚಯವಿಲ್ಲ ಎಂದು ಹೇಳಿದೆ. ಈತನ ವಿರುದ್ಧ ಖಾಲಿಸ್ತಾನ ಚಳವಳಿಯನ್ನ ಬೆಂಬಲಿಸಿದ ಆರೋಪವಿದೆ. 36 ವರ್ಷದ ಈ ನಟ ಜರ್ನೈಲ್​ ಸಿಂಗ್​ ಬಿಂದ್ರನ್ವಾಲೆಯ ಮಾತುಗಳನ್ನ ಆಗಾಗ ಹೇಳುತಿರ್ತಾನೆ.

ಅಲ್ಲದೇ ಈ ಹಿಂಸಾಚಾರದ ಬಳಿಕ ಸಿಧು, ಪ್ರಧಾನಿ ಮೋದಿ ಹಾಗೂ ಬಿಜೆಪಿಯ ಗುರುದಾಸಪುರ ಸಂಸದ ಹಾಗೂ ಬಾಲಿವುಡ್​ ನಟ ಸನ್ನಿ ಡಿಯೋಲ್​ ಜೊತೆ ಇರುವ ಫೋಟೋಗಳು ವೈರಲ್​ ಆಗಿದೆ. 2019ರ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಸನ್ನಿ ಡಿಯೋಲ್​ ಪರ ಪ್ರಚಾರ ನಡೆಸಿರೋದಾಗಿ ಸಿಧು ಹೇಳಿಕೊಂಡಿದ್ದಾನೆ. ಆದರೆ ಸಿಧು ರೈತರ ಪ್ರತಿಭಟನೆಗೆ ಸಾಥ್​ ನೀಡುತ್ತಿದ್ದಂತೆಯೇ ಸನ್ನಿ ಡಿಯೋಲ್​ ಆತನನ್ನ ದೂರವಿಟ್ಟಿದ್ದರು ಎನ್ನಲಾಗಿದೆ.

ಇನ್ನು ಕೆಂಪುಕೋಟೆಯಲ್ಲಿ  ನಿಶಾನ್​ ಸಾಹಿಬ್​ ಧ್ವಜ ಹಾರಿಸಿರೋದರ ಬಗ್ಗೆ ಸಿಧು ಸಬೂಬನ್ನ ನೀಡಿದ್ದಾನೆ. ಫೇಸ್​ಬುಕ್​ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಈತ, ನಾವು ಮಹಾನ್​ ಸಾಹಿಬ್​ ಧ್ವಜವನ್ನ ಕೆಂಪು ಕೋಟೆಯ ಮೇಲೆ ಹಾರಿಸಿದ್ದೇವೆ. ಪ್ರತಿಭಟನೆಯ ವೇಳೆ ನಮ್ಮ ಧ್ವಜವನ್ನ ಹಾರಿಸುವ ಹಕ್ಕು ನಮಗಿದೆ. ಪ್ರತಿಭಟನೆ ಅಂದಮೇಲೆ ಸಿಟ್ಟು, ಆಕ್ರೋಶಗಳನ್ನ ಹೊರಹಾಕೋದು ಸಹಜ. ಅಲ್ಲದೇ ಸಿಖ್​ ಧ್ವಜ ಹಾರಿಸುವ ವೇಳೆ ರಾಷ್ಟ್ರ ಧ್ವಜವನ್ನ ನಾವು ಕೆಳಗಿಳಿಸಿರಲಿಲ್ಲ ಎಂದೂ ಹೇಳಿಕೊಂಡಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...