alex Certify ಬಡತನದ ಹಿನ್ನೆಲೆ ಕೆದಕಿದ ಕಾಂಗ್ರೆಸ್ ನಾಯಕನಿಗೆ ಸಿಎಂ ಟಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡತನದ ಹಿನ್ನೆಲೆ ಕೆದಕಿದ ಕಾಂಗ್ರೆಸ್ ನಾಯಕನಿಗೆ ಸಿಎಂ ಟಾಂಗ್

ಮಧ್ಯ ಪ್ರದೇಶ ಸಿಎಂ ಶಿವರಾಜ್​​ ಸಿಂಗ್​ ಚವ್ಹಾಣ್​ ಬಡ ಕುಟುಂಬದಿಂದ ಬಂದವರು ಎಂಬ ಕೈ ಮುಖಂಡ ದಿನೇಶ್​ ಗುರ್ಜರ್​ ಹೇಳಿಕೆಗೆ ಸ್ವತಃ ಸಿಎಂ ಚವ್ಹಾಣ್​ ಟ್ವೀಟ್​ ಮೂಲಕ ತಿರುಗೇಟು ನೀಡಿದ್ದಾರೆ.

ಭಾನುವಾರ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ನಾಲಗೆ ಹರಿಬಿಟ್ಟಿದ್ದ ಮಧ್ಯಪ್ರದೇಶ ಕಾಂಗ್ರೆಸ್​ ನಾಯಕ ದಿನೇಶ್ ಗುರ್ಜರ್. ಶಿವರಾಜ್​ ಸಿಂಗ್​ ಚವ್ಹಾಣ್​ ಕಡುಬಡತನದ ಕುಟುಂಬದಿಂದ ಬಂದವರು. ಇಂತಹ ಕುಟುಂಬದಿಂದ ಬಂದಿದ್ರೂ ಸಹ ಅವ್ರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಚವ್ಹಾಣ್​ ಬಡವರ ರಕ್ತ ಕುಡಿದಿದ್ದಾರೆ ಅಂತಾ ಗಂಭೀರ ಆರೋಪ ಮಾಡಿದ್ರು.

ದಿನೇಶ್​ ಗುರ್ಜರ್​ ಈ ಆರೋಪಕ್ಕೆ ಟ್ವೀಟ್​ ಮೂಲಕ ಟಾಂಗ್​ ನೀಡಿರೋ ಚವ್ಹಾಣ್​, ಹೌದು ನಾನು ಬಡ ಕುಟುಂಬದಿಂದ ಬಂದವನೇ. ಹೀಗಾಗಿಯೇ ನನಗೆ ಬಡವರ ಕಷ್ಟ ಅರ್ಥವಾಗುತ್ತೆ, ನಾನು ಬಡತನದಲ್ಲಿ ಬೆಳದಿದ್ದರಿಂದಲೇ ಈಗ ಬಡ ವ್ಯಕ್ತಿಯ ಮಕ್ಕಳಿಗೆ ನೆರವಾಗಿದ್ದೇನೆ. ಅದೆಷ್ಟೋ ಬಡ ಕುಟುಂಬದ ಮಕ್ಕಳ ಮದುವೆ ಮಾಡಿದ್ದೇನೆ ಅಂತಾ ಟ್ವೀಟಾಯಿಸಿದ್ದಾರೆ.

ಇತ್ತ ಮಧ್ಯ ಪ್ರದೇಶ ಬಿಜೆಪಿ ಕೂಡ ಟ್ವೀಟ್ ಮಾಡಿ ಇದೇ ಕಾಂಗ್ರೆಸ್​​ನ ಮನಸ್ಥಿತಿ ಅಂತಾ ವ್ಯಂಗ್ಯವಾಡಿದೆ.

— Shivraj Singh Chouhan (मोदी का परिवार ) (@ChouhanShivraj) October 12, 2020

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...