alex Certify ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ, ಅಡ್ವಾಣಿ ಭಾವನಾತ್ಮಕ ಸಂದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ, ಅಡ್ವಾಣಿ ಭಾವನಾತ್ಮಕ ಸಂದೇಶ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಇಂದು ಮಧ್ಯಾಹ್ನ ಶಿಲಾನ್ಯಾಸ ನೆರವೇರಲಿದೆ. ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ನಾಯಕ ಮತ್ತು ರಾಮಮಂದಿರ ನಿರ್ಮಾಣ ಹೋರಾಟದ ನೇತೃತ್ವ ವಹಿಸಿದ್ದ ಎಲ್.ಕೆ. ಅಡ್ವಾಣಿ ಭಾವನಾತ್ಮಕವಾಗಿ ಮಾತನಾಡಿ ಹೃದಯಕ್ಕೆ ಹತ್ತಿರವಾದ ಕನಸು ಈಡೇರುತ್ತಿದೆ ಎಂದು ಸಂದೇಶ ನೀಡಿದ್ದಾರೆ.

ಜೀವನದ ಕೆಲವು ಕನಸುಗಳು ಈಡೇರಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತವೆ. ಇಂದು ಹೃದಯಕ್ಕೆ ಹತ್ತಿರವಾದ ಕನಸು ಈಡೇರುತ್ತದೆ. ರಾಮಜನ್ಮಭೂಮಿಯಲ್ಲಿ ಶ್ರೀರಾಮ ದೇಗುಲ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದ್ದು ಇದು ನನಗೆ ಮಾತ್ರವಲ್ಲ, ಇಡೀ ಭಾರತೀಯ ಸಮುದಾಯಕ್ಕೆ ಐತಿಹಾಸಿಕ ಕ್ಷಣವಾಗಿದೆ ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕೆಂಬುದು ಬಿಜೆಪಿ ಧ್ಯೇಯವಾಗಿತ್ತು. ರಾಮಜನ್ಮಭೂಮಿ ಚಳವಳಿ ವೇಳೆ ಬಿಜೆಪಿ ರಥಯಾತ್ರೆಯ ಜವಾಬ್ದಾರಿಯನ್ನು ನನಗೆ ವಹಿಸಿತ್ತು. ರಥಯಾತ್ರೆ ಅಪಾರ ಆಕಾಂಕ್ಷೆ, ಶಕ್ತಿಗೆ ಪ್ರೇರಣೆ ನೀಡಿತ್ತು. ಇದಕ್ಕಾಗಿ ಕೊಡುಗೆ ನೀಡಿದ, ತ್ಯಾಗ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅಡ್ವಾಣಿ ಸಂದೇಶ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...