alex Certify BIG NEWS: 4 ವರ್ಷಗಳ ಸೆರೆವಾಸದ ಬಳಿಕ ಇಂದು ಶಶಿಕಲಾ ತವರಿಗೆ – ಚಿನ್ನಮ್ಮನ ಭವ್ಯ ಸ್ವಾಗತಕ್ಕೆ ತಮಿಳುನಾಡು ಸಜ್ಜು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 4 ವರ್ಷಗಳ ಸೆರೆವಾಸದ ಬಳಿಕ ಇಂದು ಶಶಿಕಲಾ ತವರಿಗೆ – ಚಿನ್ನಮ್ಮನ ಭವ್ಯ ಸ್ವಾಗತಕ್ಕೆ ತಮಿಳುನಾಡು ಸಜ್ಜು

ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ ಶಶಿಕಲಾ ನಟರಾಜನ್ ಬಿಡುಗಡೆಯಾಗಿ ಇಂದು ತಮಿಳುನಾಡಿಗೆ ಪ್ರಯಾಣ ಬೆಳೆಸಿದ್ದಾರೆ. ಚಿನ್ನಮ್ಮನ ಸ್ವಾಗತಕ್ಕೆ ತಮಿಳುನಾಡಿನಲ್ಲಿ ಭರ್ಜರಿ ಸಿದ್ಧತೆ ನಡೆಸಲಾಗಿದೆ.

ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ನಿಂದ ಹೊರಟಿರುವ ಶಶಿಕಲಾಗೆ ತುರ್ತು ವೈದ್ಯರ ತಂಡ, ಫ್ಯಾಮಿಲಿ ಡಾಕ್ಟರ್, ವಕೀಲರು ಹಾಗೂ ಅಪಾರ ಅಭಿಮಾನಿಗಳು ಸಾಥ್ ನೀಡಿದ್ದು, ರಸ್ತೆ ಮಾರ್ಗವಾಗಿಯೇ ತಮಿಳುನಾಡಿನತ್ತ ಸಾಗಿದ್ದಾರೆ.

2 ಸಾವಿರ ವಾಹನಗಳೊಂದಿಗೆ ಶಶಿಕಲಾ ನಟರಾಜನ್ ಗ್ರ್ಯಾಂಡ್ ಎಂಟ್ರಿ

ತಮಿಳುನಾಡಿನಲ್ಲಿ ಚಿನ್ನಮ್ಮನ ಸ್ವಾಗತಕ್ಕೆ ಸಕಲ ಸಿದ್ಧತೆ ನಡೆಸಲಾಗಿದ್ದು, ಚೆನ್ನೈನ ಜೂಜುವಾಡಿ ಚೆಕ್ ಪೋಸ್ಟ್ ಬಳಿ ನೆರೆದಿರುವ ಸಾವಿರಾರು ಅಭಿಮಾನಿಗಳು ಪೂರ್ಣಕುಂಭ ಸ್ವಾಗತ, ಚಂಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಚಿನ್ನಮ್ಮನ ಬರುವಿಕೆಗೆ ಕಾಯುತ್ತಿದ್ದಾರೆ. ತಮಿಳುನಾಡು ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಚಿನ್ನಮ್ಮನ ಎಂಟ್ರಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದು, ಸುಮಾರು 66 ಕಡೆಗಳಲ್ಲಿ ಶಶಿಕಲಾ ರೋಡ್ ಶೋ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿದು ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Только гении могут найти Найдите 3 различия на картинках с зайцами для людей Как пройти по крыше: