alex Certify ಟಿಎಂಸಿ ಸೇರಿದ ಪತ್ನಿಗೆ ವಿಚ್ಚೇದನ ನೀಡಲು ಮುಂದಾದ ಬಿಜೆಪಿ ಸಂಸದ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಎಂಸಿ ಸೇರಿದ ಪತ್ನಿಗೆ ವಿಚ್ಚೇದನ ನೀಡಲು ಮುಂದಾದ ಬಿಜೆಪಿ ಸಂಸದ…!

ಪಶ್ಚಿಮ ಬಂಗಾಳದ ಭಾರತೀಯ ಜನತಾ ಯುವ ಮೋರ್ಚಾ ಮತ್ತು ಬಿಷ್ಣುಪುರ ಲೋಕಸಭಾ ಸಂಸದ ಸೌಮಿತ್ರಾ ಖಾನ್ ಅವರ ಪತ್ನಿ ಸುಜಾತಾ ಮೊಂಡಾಲ್ ಖಾನ್ ಸೋಮವಾರ ತೃಣಮೂಲ ಕಾಂಗ್ರೆಸ್​​ಗೆ ಸೇರ್ಪಡೆಗೊಂಡಿದ್ದು, ಬಿಜೆಪಿಯಲ್ಲಿ ತನಗೆ ಅರ್ಹವಾದ ಗೌರವ ಸಿಗಲಿಲ್ಲ ಎಂದು ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್​​ಗೆ ಸೇರ್ಪಡೆಯಾಗುವ ಬಗ್ಗೆ ಸುಜಾತಾ ಮೊಂಡಲ್​ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಸೌಮಿತ್ರ ಖಾನ್​ ಪತ್ನಿಗೆ ವಿಚ್ಚೇದನ ನೀಡೋದಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್​​ನ ಅಕ್ರಮಗಳ ಬಗ್ಗೆ ಗೊತ್ತಿದ್ದೂ ಪಕ್ಷ ಸೇರ್ಪಡೆಯಾಗಿದ್ದಾಳೆ. ಟಿಎಂಸಿ ನನ್ನಿಂದ ನನ್ನ ಪತ್ನಿಯನ್ನ ಕಸಿದುಕೊಂಡಿದೆ. ಆಡಳಿತ ಪಕ್ಷದ ವಿರುದ್ಧ ನಾನು ಕೊನೆಯವರೆಗೂ ಹೋರಾಡುವೆ ಎಂದು ಬಿಜೆಪಿ ಸಂಸದ ಸೌಮಿತ್ರ ಖಾನ್​ ಆಕ್ರೋಶ ಹೊರಹಾಕಿದ್ದಾರೆ.

2019ರ ಲೋಕಸಭೆ ಚುನಾವಣೆ ವೇಳೆ ಬಿಷ್ಣುಪುರ ಕ್ಷೇತ್ರದಿಂದ ಸೌಮಿತ್ರ ಖಾನ್​ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಆ ವೇಳೆ ಬಿಷ್ಣುಪುರ ಕ್ಷೇತ್ರ ಪ್ರವೇಶಿಸದಂತೆ ಕೋರ್ಟ್ ನಿರ್ಬಂಧ ಹೇರಿತ್ತು. ಹೀಗಾಗಿ ಪತಿಯ ಪರ ಸುಜಾತಾ ಮೊಂಡಲ್ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಆದರೆ ತನ್ನ ಈ ಶ್ರಮವನ್ನ ಬಿಜೆಪಿ ಪರಿಗಣಿಸಿಲ್ಲ ಎನ್ನೋದು ಸುಜಾತಾ ಮೊಂಡಲ್ ಆರೋಪವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...