alex Certify ಸಂಕಷ್ಟಕ್ಕೊಳಗಾದ ಮತ್ತೊಬ್ಬ ವ್ಯಕ್ತಿ ನೆರವಿಗೆ ಸಿದ್ದವಾಯ್ತು ನೆಟ್ಟಿಗರ ತಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಕಷ್ಟಕ್ಕೊಳಗಾದ ಮತ್ತೊಬ್ಬ ವ್ಯಕ್ತಿ ನೆರವಿಗೆ ಸಿದ್ದವಾಯ್ತು ನೆಟ್ಟಿಗರ ತಂಡ

ಅಮೃತಸರ: ಸಾಮಾಜಿಕ ಜಾಲತಾಣದ ತಾಕತ್ತೇ ಹಾಗೆ, ಬಹು ಬೇಗನೇ ಸಮಾನ ಮನಸ್ಕರನ್ನು ಒಂದುಗೂಡಿಸುತ್ತದೆ. ಎಂಥದ್ದೇ ಕಾರ್ಯವನ್ನು ಸುಲಭ ಮಾಡಿಬಿಡುತ್ತದೆ. ಪಾರ್ಶ್ವವಾಯುವಿಗೆ ತುತ್ತಾದ ಸಿಕ್ ವ್ಯಕ್ತಿಯೊಬ್ಬ ಅಮೃತಸರದ‌ ಒಂದು ಮಾಲ್ ಎದುರು ಅಗರಬತ್ತಿ ಮಾರುತ್ತಿರುವ ಫೋಟೋ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

ಜಸ್ ಒಬೆರಾಯ್ ಎಂಬುವವರು ಟ್ವಿಟರ್ ನಲ್ಲಿ ಸಿಕ್‌ ವ್ಯಕ್ತಿಯ ಫೋಟೋ ಹಾಕಿ “ಇವರು ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಆದರೂ ಸ್ವಾವಲಂಬನೆಯ ಜೀವನಕ್ಕಾಗಿ ಅಗರಬತ್ತಿ ಮಾರುತ್ತಿದ್ದಾರೆ. ಅಗರಬತ್ತಿ ಬಳಕೆದಾರರು ಇವರ ಬಳಿಯೇ ಕೊಂಡು ಅವರಿಗೆ ಸಹಾಯ ಮಾಡಿ‌ʼʼ ಎಂದು ವಿನಂತಿಸಿದ್ದಾರೆ. ಸಾಕಷ್ಟು ಜನ ಅವರ ಪೋಸ್ಟ್ ಗೆ ಸ್ಪಂದನೆ ನೀಡಿದ್ದಾರೆ.

ನಟ ರಿಚಾ ಚಾಂದ್ ಸಹ ಈ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದು, “ಅಮೃತಸರ ಜನರೇ ಈಗ ನಿಮ್ಮ ಪಾಳಿ ಒಟ್ಟಾಗಿ” ಎಂದು ಕರೆ ನೀಡಿದ್ದಾರೆ. ಇನ್ನೊಬ್ಬ “ಅಮೃತಸರ ಜನರೇ ಹೃದಯ ವೈಶಾಲ್ಯತೆ ಮೆರೆಯಿರಿ” ಎಂದಿದ್ದಾರೆ. ಕಳೆದ ವಾರ ದೆಹಲಿಯಲ್ಲಿ ವೃದ್ಧ ದಂಪತಿ ಡಾಬಾ ನಡೆಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ನಂತರ ಸಾವಿರಾರು ನೆಟ್ಟಿಗರು ಅವರ ಸಹಾಯಕ್ಕೆ ನಿಂತಿದ್ದರು.

https://twitter.com/iJasOberoi/status/1314800227841306624?ref_src=twsrc%5Etfw%7Ctwcamp%5Etweetembed%7Ctwterm%5E1314800227841306624%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fambarsar-waleyo-dil-waar-do-apna-sardarji-with-cerebral-palsy-sells-agarbatti-in-amritsar-netizens-shower-support%2F666478

https://twitter.com/Sankar_I_Am/status/1315377390558740480?ref_src=twsrc%5Etfw%7Ctwcamp%5Etweetembed%7Ctwterm%5E1315377390558740480%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fambarsar-waleyo-dil-waar-do-apna-sardarji-with-cerebral-palsy-sells-agarbatti-in-amritsar-netizens-shower-support%2F666478

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...