alex Certify ದೇಗುಲ ತೆರೆದ ಸಂದರ್ಭದಲ್ಲಿ 3,000 ಕೆಜಿ ಸೇಬು ಪ್ರದರ್ಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಗುಲ ತೆರೆದ ಸಂದರ್ಭದಲ್ಲಿ 3,000 ಕೆಜಿ ಸೇಬು ಪ್ರದರ್ಶನ

ಲಾಕ್​ಡೌನ್​ನಿಂದಾಗಿ ಬಂದ್ ಆಗಿದ್ದ ಅಹಮದಾಬಾದ್​ನ ಪ್ರಸಿದ್ಧ ಶ್ರೀ ಸ್ವಾಮಿನಾರಾಯಣ ಮಂದಿರ ಬರೋಬ್ಬರಿ 7 ತಿಂಗಳ ಬಳಿಕ ಭಕ್ತರ ದರ್ಶನಕ್ಕೆ ಅನುವು ನೀಡಿದೆ. ಹಾಗೂ ಸುಮಾರು 3000 ಕೆಜಿ ಸೇಬುಗಳನ್ನ ಭಕ್ತರ ಪ್ರದರ್ಶನಕ್ಕೆ ಇಡಲಾಗಿದೆ.

ಪ್ರದರ್ಶನಕ್ಕೆ ಇರಿಸಿರೋ ಸೇಬು ಹಣ್ಣುಗಳು ಕೆಂಪು ಹಸಿರು ಹಾಗೂ ಬಂಗಾರ ಬಣ್ಣಗಳನ್ನ ಹೊಂದಿವೆ, ಈ ಹಣ್ಣುಗಳನ್ನ ಪೂಜೆಯ ಬಳಿಕ ಕೊರೊನಾ ರೋಗಿಗಳಿಗೆ ವಿತರಿಸಿದ್ದೇವೆ ಅಂತಾ ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

ಕೊರೊನಾದಿಂದಾಗಿ ಮಾರ್ಚ್​ ಕೊನೆಯ ವಾರದಲ್ಲಿ ರಾಷ್ಟ್ರವ್ಯಾಪಿ ಲಾಕ್​ಡೌನ್​ ಜಾರಿಯಾಗಿದ್ದ ವೇಳೆ ದೇವಸ್ಥಾನದ ಬಾಗಿಲನ್ನ ಬಂದ್​ ಮಾಡಲಾಗಿತ್ತು. ಇದಾದ ಬಳಿಕ ಅನೇಕ ದೇವಾಲಯಗಳು ಓಪನ್​ ಆಗಿತ್ತು. ಇದೀಗ ನವರಾತ್ರಿ ಪ್ರಯುಕ್ತ ಶ್ರೀ ಸ್ವಾಮಿ ನಾರಾಯಣ ದೇವಾಲಯವೂ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...