alex Certify ಪ್ರಿಯಕರನಿಂದಲೇ ಹತ್ಯೆಗೀಡಾದ ದಂತ ವೈದ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯಕರನಿಂದಲೇ ಹತ್ಯೆಗೀಡಾದ ದಂತ ವೈದ್ಯೆ

ಆಕೆ ದಂತ ವೈದ್ಯೆ. ಈತನದ್ದು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ. ಇವರಿಬ್ಬರಿಗೆ ಅದೇಗೆ ಪ್ರೀತಿಯಾಯ್ತೋ ಗೊತ್ತಿಲ್ಲ. ಆದರೆ ಆಕೆಯ ಪ್ರಿಯಕರನೇ ಆಕೆಗೆ ಮುಳುವಾಗಿದ್ದು ಮಾತ್ರ ದುರಂತ. ಈ ಘಟನೆ ನಡೆದಿರೋದು ಕೇರಳದ ಎರ್ನಾಕುಲಂ ಜಿಲ್ಲೆಯ ಮುವಟ್ಟುಪುಜದಲ್ಲಿ.

ತ್ರಿಶೂರ್‌ನ ಒಲ್ಲೂರು ಬಳಿಯ ಕುಟ್ಟನೆಲ್ಲೂರಿನಲ್ಲಿ ಡೆಂಟಲ್ ಕ್ಲಿನಿಕ್ ನಡೆಸುತ್ತಿದ್ದ ಡಾ. ಸೋನಾಗೆ ಮೊದಲೇ ಮದುವೆಯಾಗಿದ್ದು, ಗಂಡನಿಂದ ದೂರ ಇದ್ದಳಂತೆ. ಈ ವೈದ್ಯೆಗೆ ಮಗು ಕೂಡ ಇದೆ. ಗಂಡನಿಂದ ದೂರವಾದ ಬಳಿಕ ಮಹೇಶ್ ಎಂಬಾತನೊಂದಿಗೆ 2 ವರ್ಷಗಳಿಂದ ಲಿವ್ ಇನ್ ರಿಲೇಷನ್‌ನಲ್ಲಿ ಇದ್ದರಂತೆ. ಹಣಕಾಸು ವಿಚಾರವಾಗಿ ಇವರ ನಡುವೆ ಜಗಳ ಬಂದಿದೆ. ಮಹೇಶ್ ನನಗೆ ಬರುವ ಆದಾಯವನ್ನು ದುರುಪಯೋಗ ಮಾಡಿದ್ದಾನೆ ಎಂದು ಸೋನಾ ಆರೋಪಿಸಿ ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ.

ಪೊಲೀಸರು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ. ಆದರೆ ಮಹೇಶ್ ವಿಚಾರಣೆಗೆ ಹಾಜರಾಗಿಲ್ಲ. ಈ ಮಧ್ಯೆ ಸೋನಾ ಕ್ಲಿನಿಕ್‌ನಲ್ಲಿ ಅವರ ತಂದೆ ಜೋಸ್ ಇಬ್ಬರ ನಡುವೆ ಸಂಧಾನ ಸಭೆ ಕೂಡ ಮಾಡಿದ್ದಾರೆ. ಈ ವೇಳೆ ಸಭೆಯಲ್ಲಿ ಇದ್ದ ಮಹೇಶ್ ಸೋನಾರಿಗೆ ಚಾಕುವಿನಿಂದ ಚುಚ್ಚಿ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ. ತಕ್ಷಣ ಆಕೆಯನ್ನು ತ್ರಿಶೂರ್‌ನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಇಬ್ಬರ ಜಗಳದಲ್ಲಿ 2 ವರ್ಷದ ಮಗು ಅನಾಥವಾಗಿದ್ದು ಮಾತ್ರ ದುರಂತ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...