alex Certify ಚೀನಾಗೆ ಬುದ್ದಿ ಕಲಿಸಲೇಬೇಕು ಎಂದ ಕ್ಯಾ.ಅಮರಿಂದರ್ ಸಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀನಾಗೆ ಬುದ್ದಿ ಕಲಿಸಲೇಬೇಕು ಎಂದ ಕ್ಯಾ.ಅಮರಿಂದರ್ ಸಿಂಗ್

ಚೀನಾದ ಗಡಿ ಕ್ಯಾತೆ ಭಾರತೀಯರನ್ನು ಬಡಿದೆಬ್ಬಿಸಿದೆ‌. ತಮ್ಮ ನರಿ ಬುದ್ದಿಯ ಮೂಲಕ ಪದೇ ಪದೇ ಕಾಲು ಕೆರೆದು ಜಗಳಕ್ಕೆ ನಿಂತ ಚೀನಾ ವಿರುದ್ಧ ಇಡೀ ದೇಶದ ಜನತೆ ಸಿಡಿದೆದ್ದಿದ್ದಾರೆ. ಇದರ ನಡುವೆ ಚೀನಾ ಆಪ್ ಗಳನ್ನು ಅಧಿಕೃತವಾಗಿ ಸರ್ಕಾರ ಬ್ಯಾನ್ ಮಾಡಿದೆ. ಚೀನಾ ಕಂಪನಿಗಳಿಗೆ ಸರಿಯಾದ ಬುದ್ದಿ ಕಲಿಸಿದೆ. ಇಷ್ಟಾದರೂ ಚೀನಾಗೆ ಇನ್ನೂ ಬುದ್ದಿ ಬಂದಿಲ್ಲ ಅನ್ನೋದಂತೂ ಸತ್ಯ.

ಗಡಿ ಕ್ಯಾತೆಯ ವಿಚಾರವಾಗಿ ಇದೀಗ ಕ್ಯಾ.ಅಮರಿಂದರ್ ಸಿಂಗ್ ಮಾತನಾಡಿದ್ದು, ಮೋದಿಗೆ ಪಂಥಾಹ್ವಾನ ನೀಡಿದ್ದಾರೆ‌. ಚೀನಾಗೆ ಬುದ್ದಿ ಕಲಿಸಲು ಮಿಲಿಟರಿ ಸಾಕು. ಮಿಲಿಟರಿ ಮೂಲಕ ಚೀನಾಗೆ ಬುದ್ದಿ ಕಲಿಸಿ. ಅದು ಮೋದಿ ಸರ್ಕಾರದ ಕರ್ತವ್ಯ ಎಂದು ಅವರು ಹೇಳಿದ್ದಾರೆ. ನಾವು ಈಗಾಗಲೇ ನಾಲ್ಕು ಯುದ್ಧಗಳನ್ನು ಗೆದ್ದಿದ್ದೇವೆ ಎಂತಲೂ ಹೇಳಿದ್ದಾರೆ.

ನಮ್ಮ ಯೋಧರ ಜೀವ ತೆಗೆದ ಅವರನ್ನು ನಾವು ಸುಮ್ಮನೆ ಬಿಡಬಾರದು. ತಕ್ಕ ಉತ್ತರ ನೀಡಬೇಕು. ನಮ್ಮ ನೆಲ ಕಬಳಿಸಿರುವ ಅವರಿಗೆ ಸರಿಯಾಗಿ ಬುದ್ದಿ ಕಲಿಸಬೇಕು. ಅವರಿಗೆ ಉತ್ತರ ನೀಡಲು ಇದು ಸರಿಯಾದ ಸಮಯ. ಆ ಕೆಲಸವನ್ನು ಮೋದಿ ಸರ್ಕಾರ ಮಾಡಬೇಕಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...