alex Certify ಕೋರ್ಟ್ ಗೆ ಬಂದ ʼಮೃತ ಮಹಿಳೆ’ ಹೇಳಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋರ್ಟ್ ಗೆ ಬಂದ ʼಮೃತ ಮಹಿಳೆ’ ಹೇಳಿದ್ದೇನು…?

ದೆಹಲಿ ಸಮೀಪದ ಗೋವಿಂದ್ ಟೋಲ್ ಪ್ರದೇಶದಲ್ಲಿ ಪೊಲೀಸ್ ದಾಖಲೆಯಲ್ಲಿ ಸಾವನ್ನಪ್ಪಿದ್ದ ಮಹಿಳೆಯೊಬ್ಬಳು ಕೋರ್ಟ್ ಮುಂದೆ ಹಾಜರಾಗಿದ್ದಾಳೆ. ಕೋರ್ಟ್ ನಲ್ಲಿ ನಾನು ಸತ್ತಿಲ್ಲ. ನನಗೆ ಪತಿ, ಮಕ್ಕಳಿದ್ದಾರೆಂದು ಮಹಿಳೆ ಹೇಳಿದ್ದಾಳೆ.

ಮಹಿಳೆ ಶಾರದಾ ದೇವಿ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ವರದಕ್ಷಿಣೆ ಕಿರುಕುಳ ನೀಡಿ ಅಕ್ಕನನ್ನು ಹತ್ಯೆ ಮಾಡಲಾಗಿದೆ ಎಂದು ದೂರು ನೀಡಿದ್ದ. ಸಹೋದರಿ ಸಂಪರ್ಕಕ್ಕೆ ಸಿಗದಿರುವುದು ಹಾಗೂ ಆಕೆ ಮನೆಯಲ್ಲಿ ಯಾರೂ ಇರದ ಕಾರಣ ಸಹೋದರ ದೂರು ನೀಡಿದ್ದನಂತೆ. ವಿಚಾರಣೆ ಶುರು ಮಾಡಿದ್ದ ಪೊಲೀಸರು ದೆಹಲಿಯಲ್ಲಿ ಮಹಿಳೆಯನ್ನು ಪತ್ತೆ ಮಾಡಿದ್ದಾರೆ.

ಕೋರ್ಟ್ ಗೆ ಹಾಜರಾದ ಮಹಿಳೆ ಸತ್ಯ ಹೇಳಿದ್ದಾಳೆ. 25 ವರ್ಷಗಳ ಹಿಂದೆ ಆಕೆಗೆ ಮದುವೆಯಾಗಿತ್ತಂತೆ. ಕೆಲ ವರ್ಷಗಳ ನಂತ್ರ ಪತಿ ಇನ್ನೊಂದು ಮದುವೆಯಾದ್ನಂತೆ. ಇದಾದ ನಂತ್ರ ಶಾರದಾ ಕೂಡ ಮತ್ತೊಂದು ಮದುವೆಯಾಗಿದ್ದಳಂತೆ. ಈ ವಿಷ್ಯವನ್ನು ತವರಿಗೆ ತಿಳಿಸದೆ ಶಾರದ ದೆಹಲಿ ಸೇರಿದ್ದಳಂತೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...