alex Certify ಕೊರೊನಾ ಬೆನ್ನಲ್ಲೇ ಮತ್ತೊಂದು ಬ್ಯಾಕ್ಟೀರಿಯಾ ಕಾಟ; ಕೇರಳದಲ್ಲಿ ಬಾಲಕ ಸಾವು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಬೆನ್ನಲ್ಲೇ ಮತ್ತೊಂದು ಬ್ಯಾಕ್ಟೀರಿಯಾ ಕಾಟ; ಕೇರಳದಲ್ಲಿ ಬಾಲಕ ಸಾವು..!

ಕೊರೊನಾ ಮಹಾಮಾರಿ ಆರ್ಭಟ ಇನ್ನೂ ನಿಂತಿಲ್ಲ. ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಂಡರೂ ಸೋಂಕು ದೇಶ ಬಿಟ್ಟು ಹೋಗಿಲ್ಲ. ಈಗಾಗಲೇ ಕೊರೊನಾಗೆ ಸಾಕಷ್ಟು ಜನ ಬಲಿಯಾಗಿದ್ದಾರೆ. ನಿತ್ಯ ಸಾವಿರಾರು ಕೇಸ್‌ಗಳು ಪತ್ತೆಯಾಗುತ್ತಲೇ ಇವೆ. ಇದರ ಮಧ್ಯೆ ಮತ್ತೊಂದು ಬ್ಯಾಕ್ಟೀರಿಯಾ ಹಾವಳಿ ಹೆಚ್ಚಾಗಿದೆ.

ಹೌದು, ಶಿಜೆಲ್ಲಾ ಬ್ಯಾಕ್ಟೀರಿಯಾ ಎಂಬ ಸೋಂಕಿನ ಭೀತಿ ಇದೀಗ ಹೆಚ್ಚಾಗಿದೆ. ಈ ಬ್ಯಾಕ್ಟೀರಿಯಾ ಸೋಂಕಿಗೆ ಕೇರಳದ ವಯನಾಡ್‌ನಲ್ಲಿ 11 ವರ್ಷದ ಬಾಲಕ ಬಲಿಯಾಗಿದ್ದಾನೆ. ಕೇರಳದ ಕೊಜಿಕ್ಕೋಡ್ ಜಿಲ್ಲೆಯಲ್ಲಿ ಸೋಂಕು ಕಂಡು ಬಂದಿದೆ. ಈಗಾಗಲೇ 26 ಶಂಕಿತ ಸೋಂಕಿತರು ಪತ್ತೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ.

ಇನ್ನು ಈ ಬ್ಯಾಕ್ಟೀರಿಯಾ ಸೋಂಕು ತಗುಲಿದರೆ ಆ ವ್ಯಕ್ತಿಯಲ್ಲಿ ಅತಿಸಾರ, ಜ್ವರ, ವಾಂತಿ, ಹೊಟ್ಟೆನೋವು ಕಾಣಿಸುತ್ತದೆ. ಈ ಸೋಂಕು ಕಲುಷಿತ ನೀರು ಸೇವನೆಯಿಂದ ಹರಡಿರಬಹುದು ಎಂದು ಅಲ್ಲಿನ ತಜ್ಞರ ತಂಡ ಶಂಕೆ ವ್ಯಕ್ತಪಡಿಸಿದೆ. ಒಟ್ನಲ್ಲಿ ಒಂದಾದ ಮೇಲೊಂದರಂತೆ ಬ್ಯಾಕ್ಟೀರಿಯಾಗಳು, ವೈರಸ್‌ಗಳು ಹರಡುತ್ತಿರೋದ್ರಿಂದ ತುಂಬಾ ಎಚ್ಚರದಿಂದಿರಬೇಕಾದ ಪರಿಸ್ಥಿತಿ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...