alex Certify ಕೊರೊನಾದಿಂದ ಬಿಹಾರದ ಮತ್ತೊಬ್ಬ ಸಚಿವ ಸಾವು; ಮಾರಕ ಸೋಂಕಿಗೆ ದೇಶದಲ್ಲಿ ಈವರೆಗೆ 20 ಜನಪ್ರತಿನಿಧಿಗಳು ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಬಿಹಾರದ ಮತ್ತೊಬ್ಬ ಸಚಿವ ಸಾವು; ಮಾರಕ ಸೋಂಕಿಗೆ ದೇಶದಲ್ಲಿ ಈವರೆಗೆ 20 ಜನಪ್ರತಿನಿಧಿಗಳು ಬಲಿ

ಜೆಡಿಯು ಹಿರಿಯ ನಾಯಕ ಕಪಿಲ್​ ದೇವ್​ ಕಾಮತ್​​ ಕರೊನಾದಿಂದಾಗಿ ಬಿಹಾರದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 69 ವರ್ಷದವರಾಗಿದ್ದ ಕಾಮತ್‌,​ ನಿತೀಶ್​ ಕುಮಾರ್​ ಸಂಪುಟದಲ್ಲಿ ಪಂಚಾಯತ್​ ರಾಜ್​ ಇಲಾಖೆಯ ಸಚಿವರಾಗಿದ್ದರು. ಕಿಡ್ನಿ ಸೋಂಕಿನಿಂದ ಪಾಟ್ನಾದ ಏಮ್ಸ್​ಗೆ ದಾಖಲಾಗಿದ್ದ ಕಪಿಲ್​ ದೇವ್​ ಕಾಮತ್​ರಿಗೆ ಕರೊನಾ ಸೋಂಕು ದೃಢಪಟ್ಟಿತ್ತು .

1980ರಲ್ಲಿ ರಾಜಕೀಯ ಪ್ರವೇಶಿಸಿದ್ದ ಕಾಮತ್​ 1985ರಲ್ಲಿ ಚುನಾವಣಾ ಕಣಕ್ಕೆ ಇಳಿದಿದ್ರು. ಮೊದಲ ಚುನಾವಣೆಯಲ್ಲಿ ಸೋಲನ್ನ ಅನುಭವಿಸಿದ್ರೂ ಸಹ ಬಿಹಾರದ ಅನೇಕ ಮಹಾನ್​ ನಾಯಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ರು.

ಜೆಡಿಯು ಸೇರುವುದಕ್ಕೂ ಮುನ್ನ ಕಾಂಗ್ರೆಸ್​ನಲ್ಲಿದ್ದ ಕಾಮತ್​​ 1990ರಲ್ಲಿ ಬಿಹಾರದಲ್ಲಿದ್ದ ಜಗನ್ನಾಥ್​ ಮಿಶ್ರಾ ಸಂಪುಟದಲ್ಲಿ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದರು. 90ರ ದಶಕದಲ್ಲಿ ಕಾಂಗ್ರೆಸ್​ ತ್ಯಜಿಸಿದ್ದ ಕಾಮತ್​ 2015ರಲ್ಲಿ ಜೆಡಿಯು ಪಕ್ಷದಿಂದ ಶಾಸಕರಾಗಿ ಆಯ್ಕೆಯಾದ್ರು.

ಕಾಮತ್​ರ ಆರೋಗ್ಯ ಸ್ಥಿತಿಯನ್ನ ಗಮನದ್ದಲ್ಲಿಟ್ಟುಕೊಂಡಿದ್ದ ಜೆಡಿಯು ಈ ಬಾರಿ ಅವರ ಸೊಸೆ ಮೀನಾ ಕಾಮತ್​ರಿಗೆ ವಿಧಾನಸಭಾ ಟಿಕೆಟ್ ನೀಡಿತ್ತು. ಬಿಹಾರ ಎನ್​ಡಿಎ ಸರ್ಕಾರದಲ್ಲಿ ಕರೊನಾಗೆ ಬಲಿಯಾದ ಎರಡನೇ ಸಚಿವ ಇವರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಗುರುಗ್ರಾಮ್​ನ ಮೇದಾಂತಾ ಆಸ್ಪತ್ರೆಯಲ್ಲಿ ವಿನೋದ್​ ಸಿಂಗ್​ ನಿಧನರಾಗಿದ್ದರು. ಬಿಹಾರ ಸಿಎಂ ನಿತೀಶ್ ಕುಮಾರ್,​ ಕಪಿಲ್​ ದೇವ್ ಕಾಮತ್​ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...