alex Certify ಎಲ್​ಎಸಿಯಲ್ಲಿ ಚೀನಾ ನರಿಬುದ್ಧಿ ಪ್ರದರ್ಶನ; ಡ್ರ್ಯಾಗನ್ ರಾಷ್ಟ್ರಕ್ಕೆ ಖಡಕ್​ ಸಂದೇಶ ರವಾನಿಸಿದ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್​ಎಸಿಯಲ್ಲಿ ಚೀನಾ ನರಿಬುದ್ಧಿ ಪ್ರದರ್ಶನ; ಡ್ರ್ಯಾಗನ್ ರಾಷ್ಟ್ರಕ್ಕೆ ಖಡಕ್​ ಸಂದೇಶ ರವಾನಿಸಿದ ಭಾರತ

ಪೆಂಟಗಾನ್​ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಅರುಣಾಚಲ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿರುವ ಚೀನಾಗೆ ಖಡಕ್​ ಸಂದೇಶ ರವಾನಿಸಿದೆ.
ಈ ವಿಚಾರವಾಗಿ ಮಾತನಾಡಿದ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್​​ ಬಾಗ್ಚಿ, ನೆರೆರಾಷ್ಟ್ರ ಚೀನಾ ದಶಕಗಳಿಂದ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ಒಳಗೊಂಡಂತೆ ಇನ್ನೂ ಅನೇಕ ಕಡೆಗಳಲ್ಲಿ ನಿರ್ಮಾಣ ಚಟುವಟಿಕೆಯನ್ನು ನಡೆಸುತ್ತಿದೆ. ಭಾರತವು ಇಂತಹ ಆಕ್ರಮಣಕಾರಿ ನೀತಿಯನ್ನು ಎಂದಿಗೂ ಸಹಿಸುವುದಿಲ್ಲ. ಇದು ನ್ಯಾಯಸಮ್ಮತವಾದ ಹಾದಿಯಲ್ಲ ಎಂದು ಹೇಳಿದ್ದಾರೆ.

ಪ್ರಾದೇಶಿಕ ಭದ್ರತೆ ಸಭೆಯಲ್ಲಿ ಪಾಕ್​ ಗೈರಾದ ಹಿಂದಿನ ಕಾರಣ ಬಿಚ್ಚಿಟ್ಟ ಭಾರತ

ಈ ಬಗ್ಗೆ ಭಾರತವು ಈಗಾಗಲೇ ಚೀನಾಗೆ ಎಚ್ಚರಿಕೆಯನ್ನು ನೀಡುತ್ತಿದೆ ಹಾಗೂ ಮುಂದೆಯೂ ಎಚ್ಚರಿಕೆಯ ಸಂದೇಶ ನೀಡುವುದನ್ನು ಮುಂದವರಿಸುತ್ತದೆ ಎಂದೂ ಇದೇ ವೇಳೆ ಹೇಳಿದ್ರು.

ಮಿಲಿಟರಿ ಬೆಳವಣಿಗೆಗಳ ಕುರಿತಾದ ವಾರ್ಷಿಕ ಅಮೆರಿಕ ರಕ್ಷಣಾ ಇಲಾಖೆ ನೀಡುವ ವರದಿಯಲ್ಲಿ ಚೀನಾ ನಿರ್ಮಿಸುತ್ತಿರುವ ಈ ಗ್ರಾಮದ ಬಗ್ಗೆ ಉಲ್ಲೇಖವಿದೆ. ಎಲ್​ಎಸಿಯುದ್ದಕ್ಕೂ ಎರಡು ದೇಶಗಳ ನಡುವಿನ ಉದ್ವಿಗ್ನತೆಯ ಮೇಲೆ ಚೀನಾ ಹದ್ದಿನ ಕಣ್ಣಿಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...