alex Certify ಇದರಲ್ಲಿ ಕುಮಾರಸ್ವಾಮಿ ತರಬೇಡಿ, ದರ್ಶನ್ ಕ್ಷಮೆ ಕೇಳಲಿ: ಇಂದ್ರಜಿತ್ ಲಂಕೇಶ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದರಲ್ಲಿ ಕುಮಾರಸ್ವಾಮಿ ತರಬೇಡಿ, ದರ್ಶನ್ ಕ್ಷಮೆ ಕೇಳಲಿ: ಇಂದ್ರಜಿತ್ ಲಂಕೇಶ್

ಬೆಂಗಳೂರು: ನಾನು ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಸಮಾಜದ ಹಿತದೃಷ್ಟಿಯಿಂದ ಮುಂದೆ ಬಂದಿದ್ದೇನೆ. ಬಡವರಿಗೆ, ಸಾಮಾನ್ಯರಿಗೆ ಅನ್ಯಾಯವಾಗಿದೆ. ಸಪ್ಲೇಯರ್ ಗೆ ನ್ಯಾಯ ಕೊಡಿಸಲು ನಾನು ಬಂದಿದ್ದೇನೆ. ಯಾರೋ ಸೆಲೆಬ್ರಿಟಿಗಳ ಪ್ರಕರಣವೆಂದು ನಾನು ಬಂದಿಲ್ಲ. ಹಲ್ಲೆಗೊಳಗಾದವರು, ನೊಂದವರಿಗೆ ನ್ಯಾಯ ದೊರಕಿಸಿಕೊಡಿ ಎಂದು ನಾನು ನೀಡಿದ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಪೊಲೀಸರ ತನಿಖೆಗೆ ಸಹಕಾರ ನೀಡಲು ಎಲ್ಲಾ ರೀತಿಯಲ್ಲೂ ಬದ್ಧವಾಗಿದ್ದೇನೆ. ನಾನು ಪತ್ರಕರ್ತನಾಗಿ ಹಿಂದೆ ಕುಮಾರಸ್ವಾಮಿ ಅವರನ್ನು ಅನೇಕ ಸಲ ಭೇಟಿ ಮಾಡಿದ್ದೇನೆ. ಆದರೆ, ಈ ವಿಷಯಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ. ಯಾರು ಕುಮ್ಮಕ್ಕು ನೀಡಿಲ್ಲ. ನಾನು ವೈಯಕ್ತಿಕವಾಗಿ ಮುಂದೆ ಬಂದು ಈ ರೀತಿ ನ್ಯಾಯ ಕೇಳಿದ್ದೇನೆ. ನೊಂದವರಿಗೆ ನ್ಯಾಯ ಸಿಗಲಿ, ಒಂದು ಕ್ಷಮೆ ಕೇಳಲಿ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...