![](https://kannadadunia.com/wp-content/uploads/2024/03/ramanagara-psi.jpg)
ರಾಮನಗರ: ರಾಮನಗರದಲ್ಲಿ ಪೊಲೀಸರು ವರ್ಸಸ್ ವಕೀಲರ ಸಮರ ವಿಚಾರಕ್ಕೆ ಸಂಬಂಧಿಸಿದಂತೆ ಪಿಎಸ್ ಐ ತನ್ವೀರ್ ಹುಸೇನ್ ಅಮಾನತು ಆದೇಶ ತೆರವುಗೊಳಿಸಲಾಗಿದೆ.
40 ವಕೀಲರ ಮೇಲೆ ಕೇಸ್ ದಾಖಲಿಸಿದ್ದನ್ನು ಖಂಡಿಸಿ ಪೊಲೀಸರ ವಿರುದ್ಧ ವಕೀಲರು ಪ್ರತಿಭಟನೆ ನಡೆಸಿದ್ದರು. ಐಜೂರು ಪಿಎಸ್ ಐ ತನ್ವೀರ್ ಹುಸೇನ್ ಅವರನ್ನು ಸಸ್ಪೆಂಡ್ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಫೆಬ್ರವರಿ 21ರಂದು ಪಿಎಸ್ ಐ ತನ್ವೀರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ಈಗ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಪಿಎಸ್ ಐ ತನ್ವೀರ್ ಅಮಾನತು ಆದೇಶ ತೆರವುಗೊಳಿಸಿದ್ದಾರೆ. ವಕೀಲರ ವಿರುದ್ಧ ಪ್ರಕರಣ ದಾಖಲಿಸಿದ್ದರಲ್ಲಿ ಪಿಎಸ್ ಐ ತಪ್ಪಿಲ್ಲ ಎಂದು ಸಸ್ಪೆಮ್ಡ್ ಆದೇಶ ಹಿಂಪಡೆಯಲಾಗಿದೆ. ಈ ಹಿನ್ನೆಲೆಅಲ್ಲಿ ಐಜೂರು ಠಾಣೆಯಲ್ಲಿ ಪಿಎಸ್ ಐ ತನ್ವೀರ್ ಹುಸೇನ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ.