alex Certify ಲಕ್ಷ್ಮಿ ದೇವಿಯ ಕೃಪೆಗಾಗಿ ಶುಕ್ರವಾರ ಮಾಡಿ ಈ 5 ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ಷ್ಮಿ ದೇವಿಯ ಕೃಪೆಗಾಗಿ ಶುಕ್ರವಾರ ಮಾಡಿ ಈ 5 ಕೆಲಸ

ಸನಾತನ ಧರ್ಮದಲ್ಲಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿಯ ಆಶೀರ್ವಾದ ಪಡೆದ ವ್ಯಕ್ತಿಯು ತನ್ನ ಜೀವನದಲ್ಲಿ ಮತ್ತೆಂದೂ ಬಡತನವನ್ನು ಅನುಭವಿಸಬೇಕಾಗಿಲ್ಲ ಎಂದು ಹೇಳಲಾಗುತ್ತದೆ. ರಾಜನಾಗಲಿ ಅಥವಾ ಬಡವನಾಗಲಿ ಪ್ರತಿಯೊಬ್ಬರೂ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಲಕ್ಷ್ಮಿ ದೇವಿಯ ಕೃಪೆಗಾಗಿ ಶುಕ್ರವಾರ 5 ಕೆಲಸಗಳನ್ನು ಮಾಡಬೇಕು.

ಶುಕ್ರವಾರ ಬೆಳಗ್ಗೆ ಎದ್ದ ತಕ್ಷಣ ಮೊದಲು ನಿಮ್ಮ ಎರಡೂ ಅಂಗೈಗಳನ್ನು ಕಣ್ಣ ಮುಂದೆ ಉಜ್ಜಿಕೊಳ್ಳಿ. ನಂತರ ‘ಕರಾಗ್ರೇ ವಸತೇ ಲಕ್ಷ್ಮಿ, ಕರ ಮಧ್ಯೇ ಸರಸ್ವತಿ, ಕರಮೂಲೇ ಸ್ಥಿತೋ ಗೌರಿ, ಬ್ರಹ್ಮ ಪ್ರಭಾತೇ ಕರದರ್ಶನಂ’ ಎಂಬ ಮಂತ್ರವನ್ನು ಪಠಿಸಿ. ನಂತರ ಕೈಗಳನ್ನು ಮುಖದ ಮೇಲೆ ಉಜ್ಜಿಕೊಳ್ಳಿ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ, ಬ್ರಹ್ಮ ಮತ್ತು ಸರಸ್ವತಿಯ ಆಶೀರ್ವಾದ ಸಿಗುತ್ತದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಲಕ್ಷ್ಮಿ ಮಾತೆ ಅತ್ಯಂತ ಸ್ವಚ್ಛತೆ ಇರುವ ಮನೆಗಳಿಗೆ ಮಾತ್ರ ಆಗಮಿಸುತ್ತಾಳೆ. ಆದ್ದರಿಂದ, ಶುಕ್ರವಾರ ಮಾತ್ರವಲ್ಲದೆ ವಾರದ ಎಲ್ಲಾ ಏಳು ದಿನಗಳಲ್ಲೂ ಮನೆಯನ್ನು ಶುಚಿಯಾಗಿಟ್ಟುಕೊಳ್ಳಿ. ಕಸ ಗುಡಿಸಿದ ಬಳಿಕ ಪೊರಕೆಯನ್ನು ಸ್ವಚ್ಛವಾದ ಸ್ಥಳದಲ್ಲಿ ಇರಿಸಿ. ಮನೆಯ ಮುಖ್ಯ ಗೇಟಿನ ಮುಂದೆ ಕಸದ ತೊಟ್ಟಿಯನ್ನು ಇಡಬಾರದು.

ಶುಕ್ರವಾರ ಮನೆಯಿಂದ ಹೊರಡುವಾಗ ಸ್ವಲ್ಪ ಸಿಹಿ ಮೊಸರು ಸೇವಿಸಿ. ಹೀಗೆ ಮಾಡುವುದರಿಂದ ದಾರಿಯಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ. ಅಷ್ಟೇ ಅಲ್ಲ ಶುಕ್ರವಾರ ಕಪ್ಪು ಇರುವೆಗಳಿಗೆ ಸಕ್ಕರೆ ಹಾಕಿ. ಇದರಿಂದ ಪುಣ್ಯ ಫಲ ಸಿಗುತ್ತದೆ.

ಶುಕ್ರವಾರ ದೇವಸ್ಥಾನಕ್ಕೆ ಹೋಗಿ ಲಕ್ಷ್ಮಿ ದೇವಿಗೆ ಮಖಾನ, ಬಟಾಶ, ಶಂಖ, ಕಮಲ ಮತ್ತು ಕೌರಿಗಳನ್ನು ಅರ್ಪಿಸಿ. ಹಣದ ಕೊರತೆ ನೀಗಲು ಶುಕ್ರವಾರ ಲಕ್ಷ್ಮೀ ಸ್ತೋತ್ರ, ಕನಕಧಾರಾ ಸ್ತೋತ್ರ ಅಥವಾ ಶ್ರೀ ಸೂಕ್ತವನ್ನು ಪಠಿಸಬೇಕು. ಇದರಿಂದ ಕುಟುಂಬದಲ್ಲಿನ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ.

ಶುಕ್ರವಾರ ಲಕ್ಷ್ಮಿಗೆ ಗುಲಾಬಿ ಅಥವಾ ಕಮಲದ ಹೂವನ್ನು ಅರ್ಪಿಸಲು ಮರೆಯಬೇಡಿ. ಲಕ್ಷ್ಮಿಯನ್ನು ಅನ್ನಪೂರ್ಣೆ ಅಥವಾ ಧಾನ್ಯಗಳ ದೇವತೆ ಎಂದೂ ಕರೆಯುತ್ತಾರೆ. ಆಕೆ ಪ್ರಪಂಚದ ಎಲ್ಲಾ ಜೀವಿಗಳಿಗೆ ಆಹಾರವನ್ನು ನೀಡುತ್ತಾರೆ. ಲಕ್ಷ್ಮಿಯ ಕೃಪೆ ಇಲ್ಲದಿದ್ದರೆ ಯಾರಿಗೂ ಒಂದು ಕಾಳು ಕೂಡ ಸಿಗುವುದಿಲ್ಲ. ಆದ್ದರಿಂದ ಶುಕ್ರವಾರ ಮನೆಯಲ್ಲಿ ಪಾಯಸ ಮಾಡಬೇಕು. ಅಕ್ಕಿ ಪಾಯಸ ಮಾಡಿ ನೈವೇದ್ಯ ಮಾಡುವುದು ಅತ್ಯಂತ ಸೂಕ್ತ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...