alex Certify Darshan Case : ಚಿನ್ನದ ತಗಡು ಅಂತ ನಾನು ಸ್ಟೇಟಸ್ ಹಾಕಿರಲಿಲ್ಲ-ನಿರ್ಮಾಪಕ ಉಮಾಪತಿ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Darshan Case : ಚಿನ್ನದ ತಗಡು ಅಂತ ನಾನು ಸ್ಟೇಟಸ್ ಹಾಕಿರಲಿಲ್ಲ-ನಿರ್ಮಾಪಕ ಉಮಾಪತಿ ಸ್ಪಷ್ಟನೆ

ಬೆಂಗಳೂರು : ಚಿನ್ನದ ತಗಡು ಅಂತ ನಾನು ಸ್ಟೇಟಸ್ ಹಾಕಿರಲಿಲ್ಲ ಎಂದು ಸ್ಯಾಂಡಲ್ ವುಡ್ ನಿರ್ಮಾಪಕ ಉಮಾಪತಿ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ ನಿರ್ಮಾಪಕ ಉಮಾಪತಿ ಚಿನ್ನದ ತಗಡು ಅಂತ ನಾನು ಸ್ಟೇಟಸ್ ಹಾಕಿರಲಿಲ್ಲ , ಸ್ನೇಹಿತರು ಹಾಕಿದ್ದನ್ನು ನಾನು ಶೇರ್ ಮಾಡಿದ್ದೇನೆ ಅಷ್ಟೇ ಎಂದು ಹೇಳಿದರು

ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವೆ ನಡೆದ ವಿವಾದ ನಿಮಗೆ ಗೊತ್ತೇ ಇದೆ. ಈ ಹಿಂದೆ ದರ್ಶನ್ ” ಲೇ ತಗಡೆ..” ಅನ್ನೋ ಪದ ಬಳಸಿದಾಗಲೂ ತುಂಬಾ ತಾಳ್ಮೆಯಿಂದ ಉಮಾಪತಿ ಪ್ರತಿಕ್ರಿಯೆ ನೀಡಿದ್ದರು. ಈಗಲೂ ಅದೇ ತಾಳ್ಮೆಯಿಂದ ಉಮಾಪತಿ ಮಾತಾಡಿದ್ದಾರೆ. ಚಿನ್ನದ ತಗಡು ಅಂತ ನಾನು ಸ್ಟೇಟಸ್ ಹಾಕಿರಲಿಲ್ಲ, ನನ್ನ ಸ್ನೇಹಿತರು ಹಾಕಿದ್ದರು. ಅದನ್ನು ನಾನು ಶೇರ್ ಮಾಡಿದೆ. ಎಲ್ಲದಕ್ಕೂ ತಾಳ್ಮೆ ಇರಬೇಕು ಎಂದು ಹೇಳುವ ಮೂಲಕ ನಟ ದರ್ಶನ್ ಗೆ ನಯವಾಗಿಯೇ ತಿರುಗೇಟು ನೀಡಿದ್ದಾರೆ.

ಇವತ್ತು ನಾನು ಹಾಕಿದ ಪೋಸ್ಟ್ ಯಾರಿಗೋ ಒಬ್ಬ ವ್ಯಕ್ತಿಗಾಗಿ ಹಾಕಿಲ್ಲ. ತಾಳ್ಮೆಯಿಂದ ಕಾದರೆ ಏನಾಗುತ್ತೆ? ಅನ್ನೋದಕ್ಕೆ ಈ ಪೋಸ್ಟ್ ಹಾಕಿದ್ದೆ. ಯಾವುದೋ ಒಬ್ಬ ವ್ಯಕ್ತಿಗೆ ಮುಟ್ಟಬೇಕು ಎಂದಿದ್ದರು. “ಈಗ ಕಾನೂನಿನ ಚೌಕಟ್ಟಿನಲ್ಲಿ ಏನಾಗಬೇಕೋ ಅದು ಆಗುತ್ತಿದೆ. ನಿಜವಾಗಲೂ ರಾಜ್ಯ ಸರ್ಕಾರಕ್ಕೆ ಹ್ಯಾಂಡ್ಸ್ ಹಾಫ್ ಹೇಳಬೇಕು ಎಂದು ಉಮಾಪತಿ ಹೇಳಿದರು.

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...