alex Certify ಕಲಬುರಗಿಯಲ್ಲಿ ಘೋರ ಘಟನೆ ; ನದಿಗೆ ಹಾರಿದ್ದ ಪತ್ನಿ ಬಚಾವ್ ಮಾಡಲು ಹೋಗಿ ಪತಿ, ಸಂಬಂಧಿ ದಾರುಣ ಸಾವು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲಬುರಗಿಯಲ್ಲಿ ಘೋರ ಘಟನೆ ; ನದಿಗೆ ಹಾರಿದ್ದ ಪತ್ನಿ ಬಚಾವ್ ಮಾಡಲು ಹೋಗಿ ಪತಿ, ಸಂಬಂಧಿ ದಾರುಣ ಸಾವು..!

ಕಲಬುರಗಿ : ನದಿಗೆ ಹಾರಿದ್ದ ಪತ್ನಿ ಬಚಾವ್ ಮಾಡಲು ಹೋಗಿ ಪತಿ, ಸಂಬಂಧಿ ದಾರುಣವಾಗಿ ಮೃತಪಟ್ಟ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಅಫಜಲಪುರ ತಾಲೂಕಿನ ದೇವಣಗಾಂವ ಬ್ರಿಡ್ಜ್ ಕೆಳಗಿನ ಭೀಮಾ ನದಿಯಲ್ಲಿ ಈ ದುರ್ಘಟನೆ ನಡೆದಿದೆ.
ಕೌಟುಂಬಿಕ ಕಲಹದ ಹಿನ್ನೆಲೆ ಜಗಳ ಮಾಡಿಕೊಂಡು ತಾಲೂಕಿನ ಕಡಣಿ ಗ್ರಾಮದ ನಿವಾಸಿ ಲಕ್ಷ್ಮಿ ಎಂಬುವವರು ನದಿಗೆ ಜಿಗಿದಿದ್ದಳು. ಪತಿ ಶಿವಕುಮಾರ ಕಡಣಿ ಹಾಗೂ ಸಂಬಂಧಿ ರಾಜು ಆಕೆಯನ್ನು ರಕ್ಷಿಸಲು ನದಿಗೆ ಜಿಗಿದಿದ್ದಾರೆ.

ಆದರೆ ಹೆಂಡತಿ ಮೀನುಗಾರರ ಮೀನಿನ ಬಲೆಗೆ ಸಿಲುಕಿ ಬದುಕುಳಿದಿದ್ದಾರೆ.ಆದರೆ ಆಕೆಯ ಗಂಡ ಶಿವಕುಮಾರ ಹಾಗೂ ಸಂಬಂಧಿ ರಾಜು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಇಬ್ಬರ ಶವವನ್ನು ಮೇಲಕ್ಕೆತ್ತಿದ್ದಾರೆ. ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...