alex Certify ‘ಶಾಂತಂ ಪಾಪಂ’ ನಲ್ಲಿ ದರ್ಶನ್ ಕಥೆ ಬಂತೇ..? : ಏನಿದು ‘ಡೇರ್ ಡೆವಿಲ್ ದೇವದಾಸ್’ ಕಹಾನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಶಾಂತಂ ಪಾಪಂ’ ನಲ್ಲಿ ದರ್ಶನ್ ಕಥೆ ಬಂತೇ..? : ಏನಿದು ‘ಡೇರ್ ಡೆವಿಲ್ ದೇವದಾಸ್’ ಕಹಾನಿ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್ ಗೆ ಸಂಬಂಧಿಸಿದ ವಿಷಯಗಳನ್ನೇ ಇಟ್ಟುಕೊಂಡು ಸಿನಿಮಾ ಟೈಟಲ್ ನೋಂದಣಿ ಮಾಡಿಸಲು ಕೆಲವರು ಆಸಕ್ತಿ ತೋರಿಸುತ್ತಿದ್ದಾರೆ. ಇದರ ನಡುವೆ ಧಾರಾವಾಹಿಯಲ್ಲೂ ದರ್ಶನ್ ಗೆ ಸಂಬಂಧಿಸಿದ ಕಥೆ ಬರುತ್ತಿದೆ.

ಹೌದು, ದರ್ಶನ್ & ಗ್ಯಾಂಗ್ ನಿಂದ ಕೊಲೆಯಾದ ರೇಣುಕಾಸ್ವಾಮಿ ಕತೆ ಇಟ್ಟುಕೊಂಡು ಸಿನಿಮಾ ಮಾಡಲು ಹಲವರು ಆಸಕ್ತಿ ತೋರಿಸುತ್ತಿದ್ದಾರೆ. ಇದರ ನಡುವೆ ಕಿರುತೆರೆ ಶೋ ಶಾಂತಂ ಪಾಪಂ ನಲ್ಲಿ ದರ್ಶನ್ ಕಥೆಯನ್ನೇ ಹೋಲುವ ಎಪಿಸೋಡ್ ಪ್ರಸಾರವಾಗುತ್ತಿದೆ. ಸದ್ಯ ರಿಲೀಸ್ ಆದ ಪ್ರೋಮೋ ಎಲ್ಲರ ಗಮನ ಸೆಳೆಯುತ್ತಿದೆ.

ಡೇರ್ ಡೆವಿಲ್ ದೇವದಾಸ್ ಎಪಿಸೋಡ್ ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ಹೋಲುತ್ತದೆ. ಒಂದು ಊರಲ್ಲಿ ದಾಸ್ ಎಂಬ ಒಬ್ಬ ಶ್ರೀಮಂತನಿರುತ್ತಾನೆ, ನಂತರ ಆತ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗುತ್ತಾನೆ. ಈಗಾಗಲೇ ಮದುವೆ ಆಗಿ ಒಂದೊಳ್ಳೆ ಸಂಸಾರ ನಡೆಸುತ್ತಿದ್ರೂ ಓರ್ವ ನಟಿಯ ಮೋಹದ ಬಲೆಗೆ ಬೀಳುತ್ತಾನೆ. ಆ ನಟಿಗೆ ಓರ್ವ ವ್ಯಕ್ತಿಯೋರ್ವ ಅಶ್ಲೀಲ ಮೆಸೇಜ್ ಮಾಡಿ ತೊಂದರೆ ಕೊಡಲು ಶುರು ಮಾಡುತ್ತಾನೆ. ಇದರಿಂದ ನೊಂದ ನಟಿ ಈ ವಿಚಾರವನ್ನು ದಾಸ್ ನ ಮುಂದಿಡುತ್ತಾನೆ. ಇದರಿಂದ ಕೆರಳಿದ ದಾಸ್ ಆತನನ್ನು ಶೆಡ್ ವೊಂದಕ್ಕೆ ಕರೆತಂದು ಕೊಲೆ ಮಾಡುತ್ತಾನೆ.

ಈ ಕಥೆ ಹೊಂದಿರುವ ಪ್ರೋಮೊ ಸಖತ್ ವೈರಲ್ ಆಗುತ್ತಿದೆ. ಪ್ರೋಮೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದು, ಡೌಟೇ ಇಲ್ಲ ಇದು ಪಕ್ಕಾ ರೇಣುಕಾ ಸ್ವಾಮಿ ಕಥೆಯೇ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...