
ಹರಿಯಾಣಾದಲ್ಲಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ 10 ವರ್ಷ ಜೈಲು ಶಿಕ್ಷೆ ಅನುಭವಿಸಿದ ಮಾಜಿ ಸಂಸದ ಅಜಯ್ ಎಸ್ ಚೌಟಾಲಾ ಅವರು ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಅಕ್ರಮವಾಗಿ ನೇಮಕಾತಿ ಮೂಲಕ 3,000 ಶಿಕ್ಷಕರನ್ನು ಸೇವೆಗೆ ನೇಮಕ ಮಾಡಿದ್ದಕ್ಕಾಗಿ ಅಜಯ್ ಚೌಟಾಲಾ ಹಾಗೂ ಅವರ ತಂದೆ, ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಸೇರಿದಂತೆ 55 ಮಂದಿಗೆ ಶಿಕ್ಷೆ ವಿಧಿಸಲಾಗಿದೆ.
ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್ಎಲ್ಡಿ) ನೇತೃತ್ವ ವಹಿಸಿದ್ದ ಅಜಯ್ ಚೌಟಾಲಾ ಮತ್ತು ಅವರ ತಂದೆ, ಹರಿಯಾಣದಲ್ಲಿ 1999-2000 ರಲ್ಲಿ ಸೂಕ್ತವಾದ ಕಾರ್ಯವಿಧಾನದ ಮೂಲಕ ಅರ್ಜಿ ಸಲ್ಲಿಸಿದವರ ಬದಲಿಗೆ 3,000ಕ್ಕೂ ಹೆಚ್ಚು ಜೂನಿಯರ್ ಮೂಲಭೂತ ಶಿಕ್ಷಕರನ್ನು (ಜೆಬಿಟಿ) ನೇಮಕ ಮಾಡಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದರು.
BIG NEWS: ಹಿಜಾಬ್ ವಿವಾದ; ತುರ್ತು ವಿಚಾರಣೆಗೆ ಮತ್ತೆ ನಿರಾಕರಿಸಿದ ಸುಪ್ರೀಂ ಕೋರ್ಟ್; ಕಿವಿಮಾತು ಹೇಳಿದ ನ್ಯಾಯಾಲಯ
ತಿಹಾರ್ ಜೈಲಿನ ಹೊರಗೆ ಬರುತ್ತಿದ್ದಂತೆ ತಮ್ಮ ನಾಯಕನನ್ನು ಸನ್ಮಾನಿಸಲು ಪುಷ್ಪಗುಚ್ಛಗಳನ್ನು ತಂದ ಬೆಂಬಲಿಗರು ಅಜಯ್ ಚೌಟಾಲಾರನ್ನು ಅಪ್ಪಿ ಮುದ್ದಾಡಿ ಹೊರ ಜಗತ್ತಿಗೆ ಸ್ವಾಗತ ಕೋರಿದ್ದಾರೆ.
ಅಜಯ್ ಚೌಟಾಲಾ ಪುತ್ರ ದುಶ್ಯಂತ್ ಚೌಟಾಲ ಹರಿಯಾಣದ ಉಪ ಮುಖ್ಯಮಂತ್ರಿಯಾಗಿದ್ದಾರೆ. ದುಶ್ಯಂತ್ ಚೌಟಾಲಾ ಅವರು ಜನನಾಯಕ್ ಜನತಾ ಪಾರ್ಟಿ(ಜೆಜೆಪಿ) ಮುಖ್ಯಸ್ಥರಾಗಿದ್ದಾರೆ. ಚೌಟಾಲಾಗಳ ನಡುವಿನ ಭಿನ್ನಭಿಪ್ರಾಯಗಳ ಬಳಿಕ 2018 ರಲ್ಲಿ ಐಎನ್ಎಲ್ಡಿಯಿಂದ ಬೇರ್ಪಟ್ಟ ಬಣವಾಗಿ ಜೆಜೆಪಿ ರೂಪುಗೊಂಡಿತು.
ಕೇಂದ್ರೀಯ ತನಿಖಾ ದಳ (ಸಿಬಿಐ) ಜೆಬಿಟಿ ಹಗರಣಕ್ಕೆ ಸಂಬಂಧಿಸಿದಂತೆ ಜೂನ್ 2008ರಲ್ಲಿ ಚಾರ್ಜ್ಶೀಟ್ ಸಲ್ಲಿಸಿತ್ತು. ದೂರನ್ನು ದಾಖಲಿಸಿದ್ದ ಐಎಎಸ್ ಅಧಿಕಾರಿ ಸಂಜೀವ್ ಕುಮಾರ್ ಮತ್ತು ವಿಶೇಷ ಕರ್ತವ್ಯದಲ್ಲಿರುವ ಓಂ ಪ್ರಕಾಶ್ ಚೌಟಾಲಾ ಅವರ ಮಾಜಿ ಅಧಿಕಾರಿ ವಿದ್ಯಾಧರ್ ಅವರನ್ನು ಸಿಬಿಐ ತನ್ನ ಆರೋಪಪಟ್ಟಿಯಲ್ಲಿ ಹೆಸರಿಸಿತ್ತು.
ದೂರು ದಾಖಲಿಸಿಕೊಂಡಿದ್ದ ಐಎಎಸ್ ಅಧಿಕಾರಿಯೂ ತಪ್ಪಿತಸ್ಥರೆಂದು ಕಂಡುಬಂದಿದ್ದಾರೆ.