alex Certify SHOCKING: ಮದುವೆ ಮಂಟಪದಲ್ಲಿ ವಧುವಿನ ಸಂಬಂಧಿಕರ ಮೇಲೆ ಕಾರ್ ನುಗ್ಗಿಸಿದ ವರನ ಕಡೆ ಅತಿಥಿ: ಓರ್ವ ಸಾವು, 9 ಮಂದಿಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಮದುವೆ ಮಂಟಪದಲ್ಲಿ ವಧುವಿನ ಸಂಬಂಧಿಕರ ಮೇಲೆ ಕಾರ್ ನುಗ್ಗಿಸಿದ ವರನ ಕಡೆ ಅತಿಥಿ: ಓರ್ವ ಸಾವು, 9 ಮಂದಿಗೆ ಗಾಯ

ಜೈಪುರ: ರಾಜಸ್ಥಾನದ ದೌಸಾದಲ್ಲಿ ಮದುವೆಯ ಸಂಭ್ರಮಾಚರಣೆ ಶೋಕಾಚರಣೆಗೆ ತಿರುಗಿದೆ. ಒಬ್ಬ ವ್ಯಕ್ತಿ ತನ್ನ ಕಾರ್ ನಿಂದ ಕೆಲವರಿಗೆ ಡಿಕ್ಕಿ ಹೊಡೆಸಿದ್ದು, ಘಟನೆಯಲ್ಲಿ ಒಬ್ಬರು ಮೃತಪಟ್ಟು, 9 ಮಂದಿ ಗಾಯಗೊಂಡಿದ್ದಾರೆ.

ಆರೋಪಿ ಹಾಗೂ ಸಂತ್ರಸ್ತರು ಮದುವೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿರು ವರನ ಕಡೆಯಿಂದ ಬಂದಿದ್ದ ಅತಿಥಿಯಾಗಿದ್ದರೆ, ಗಾಯಗೊಂಡವರು ವಧುವಿನ ಕಡೆಯವರಾಗಿದ್ದಾರೆ.

ಮದುವೆ ಕಾರ್ಯಕ್ರಮದ ವೇಳೆ ಪಟಾಕಿ ಸಿಡಿಸುವ ವಿವಾದ ವಿಕೋಪಕ್ಕೆ ತಿರುಗಿದ್ದು, ವರನ ಬಾರಾತ್ ಸದಸ್ಯರೊಬ್ಬರು ಅತಿಥಿಗಳ ಮೇಲೆ ಕಾರು ಹರಿಸಿ ಓರ್ವ ಸಾವನ್ನಪ್ಪಿ ಎಂಟು ಮಂದಿ ಗಾಯಗೊಂಡಿರುವ ಘಟನೆ ದೌಸಾ ಜಿಲ್ಲೆಯ ಲಾಲ್ಸೋಟ್ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದಿದೆ. ಗಾಯಾಳುಗಳಲ್ಲಿ ಕೆಲವರನ್ನು ಚಿಕಿತ್ಸೆಗಾಗಿ ಜೈಪುರಕ್ಕೆ ಸಾಗಿಸಲಾಗಿದೆ ಎಂದು ಎಸ್‌ಹೆಚ್‌ಒ(ಲಾಲ್ಸೋಟ್) ರಾಮ್ನಿವಾಸ್ ಮೀನಾ ತಿಳಿಸಿದ್ದಾರೆ.

ಘಟನೆಯಲ್ಲಿ ಗೋಲು ಮೀನಾ(22) ಮೃತಪಟ್ಟಿದ್ದಾರೆ. ಆರೋಪಿ ಧರ್ಮೇಂದ್ರ ಕುಮಾರ್‌ನನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆಯ ನಂತರ ಬಂಧಿಸಲಾಗುವುದು. ಗದ್ದಲದ ನಡುವೆಯೂ ವಿವಾಹವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು ಎಂದು  ತಿಳಿಸಿದ್ದಾರೆ.

ಲಾಡ್‌ಪುರ ಗ್ರಾಮದಲ್ಲಿ ರಾತ್ರಿ 9:30ಕ್ಕೆ ಈ ಘಟನೆ ನಡೆದಿದೆ. ನಿವಾಯಿ ಸಮೀಪದ ಭಗವತ್‌ಪುರ ಗ್ರಾಮದಿಂದ ಬರುತ್ತಿದ್ದ ಬರಾತ್‌ನಲ್ಲಿ ಕೆಲವು ಅತಿಥಿಗಳು ಕಾರಿನ ಬಾನೆಟ್ ಮತ್ತು ಛಾವಣಿಯ ಮೇಲೆ ನಿಂತು ಪಟಾಕಿ ಸಿಡಿಸುತ್ತಿದ್ದರು. ಮನೆಗೆ ತೆರಳುತ್ತಿದ್ದ ವಧುವಿನ ಕೆಲವು ಸಂಬಂಧಿಕರು ಅತಿಥಿಗಳನ್ನು ದಾರಿ ಮಾಡಿಕೊಡುವಂತೆ ಕೇಳಿದಾಗ ವಾಗ್ವಾದ ನಡೆಯಿತು.  ಜಗಳವಿಕೋಪಕ್ಕೆ ತಿರುಗಿ ಕೆಲವು ಮದುವೆಯ ಅತಿಥಿಗಳು ಇತರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ನೆರೆದಿದ್ದವರು ಪರಿಸ್ಥಿತಿಯನ್ನು ಹದಗೆಡಿಸಲು ಮಧ್ಯಪ್ರವೇಶಿಸಿದರು, ಆದರೆ ಗದ್ದಲದ ಸಮಯದಲ್ಲಿ, ಮದುವೆಯ ಅತಿಥಿಯೊಬ್ಬರು ವಧುವಿನ ಸಂಬಂಧಿಕರ ಮೇಲೆ ತನ್ನ ಕಾರನ್ನು ಚಲಾಯಿಸಿದರು, 9 ಜನರು ಗಾಯಗೊಂಡರು. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಜೈಪುರ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳು ಗೋಲು ಮೀನಾ ಮೃತಪಟ್ಟಿದ್ದಾರೆ.

ವಧುವಿನ ಸಂಬಂಧಿಕರು ಪೊಲೀಸರಿಗೆ ತಮ್ಮ ಎಫ್‌ಐಆರ್‌ನಲ್ಲಿ ಇದನ್ನು ಅಪಘಾತ ಪ್ರಕರಣ ಎಂದು ವರದಿ ಮಾಡಿದ್ದಾರೆ ಎಂದು ದೌಸಾ ಪೊಲೀಸರು ತಿಳಿಸಿದ್ದಾರೆ. ಆದರೆ, ಪೊಲೀಸರು ಸ್ಥಳಕ್ಕಾಗಮಿಸಿ ಸಂಬಂಧಿಕರನ್ನು ಮಾತನಾಡಿಸಿದಾಗ ಪಟಾಕಿ ಸಿಡಿಸಿರುವುದು ಹಾಗೂ ಇತರೆ ವಾಹನಗಳಿಗೆ ದಾರಿ ಮಾಡಿಕೊಡುವ ವಿಚಾರವೇ ಘಟನೆಗೆ ಕಾರಣವಾಗಿದೆ ಎನ್ನುವುದು ಗೊತ್ತಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Získejte inspiraci a tipy pro vytváření chutných jídel doma, objevte nové lifestylové triky a naučte se pěstovat zdravé plodiny ve vaší zahradě. S našimi užitečnými články a nápady získáte dovednosti potřebné pro zlepšení kvality života a radost z vaší kuchyně a zahrady. Získejte nejlepší rady a triky od našich odborníků a staničte se mistrem ve vaření, životním stylu a zahradničení. Pokud přidáte tuto složku – tajemství měkkého a šťavnatého Proč se zamlžují okna v autě: Okroshka: дешевое лекарство со скорыми результатами в унитазной Jak si umýt vlasy Jak efektivně odstranit skvrny z ubrusů: tipy pro každou hospodyňku Jarní superpotravina: Jak osvěžit ledničku za Jak rychle opravit Proč se Štěstí v domě: Tajemství, proč spathiphyllum nekvete Jak správně šetřit Tipy pro domácnost, kuchařství a zahradničení - články plné užitečných rad a triků, které vám pomohou v každodenním životě. Navštivte náš web pro jedinečné recepty, kreativní nápady a inspiraci pro úspěšnou zahradničení!