alex Certify ಸರ್ಕಾರಿ ನೌಕರರಿಗೆ ನೆಮ್ಮದಿ ಸುದ್ದಿ: ಅನಾಮಧೇಯ ದೂರಿನ ಕುರಿತು ತನಿಖೆ ನಡೆಸದಿರಲು ತೀರ್ಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ನೌಕರರಿಗೆ ನೆಮ್ಮದಿ ಸುದ್ದಿ: ಅನಾಮಧೇಯ ದೂರಿನ ಕುರಿತು ತನಿಖೆ ನಡೆಸದಿರಲು ತೀರ್ಮಾನ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವಿರುದ್ಧದ ದೂರಿಗೆ ಬಿಗಿ ನಿಯಮ ರೂಪಿಸಿದ್ದು, ಬೇನಾಮಿ ದೂರು ಬಂದರೆ ತನಿಖೆ ಇಲ್ಲ. ದೂರುದಾರರ ಹೆಸರು, ವಿಳಾಸ ಖಚಿತಪಡಿಸಿ ಅಗತ್ಯ ದಾಖಲೆ ಒದಗಿಸಿದರೆ ಮಾತ್ರ ತನಿಖೆ ಆದೇಶ ಹೊರಡಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದು, ಸರ್ಕಾರಿ ನೌಕರರ ಬೇಡಿಕೆಗೆ ಅಸ್ತು ಎಂದಿದ್ದಾರೆ.

ಸರ್ಕಾರಿ ನೌಕರರ ವಿರುದ್ಧ ದೂರು ನೀಡುವ ದೂರುದಾರರ ವಿಳಾಸ, ಹೆಸರು ಖಚಿತಪಡಿಸಿಕೊಂಡು ಅಗತ್ಯ ಪೂರಕ ದಾಖಲೆಗಳನ್ನು ಒದಗಿಸಿದ ನಂತರ ಪ್ರಾಥಮಿಕ ತನಿಖೆ ಪರಿಗಣಿಸುವ ತೀರ್ಮಾನ ಕೈಗೊಳ್ಳಲಾಗಿದೆ.

ನಕಲಿ ಹೆಸರು ಮತ್ತು ವಿಳಾಸ ಬಳಸಿಕೊಂಡು ನೌಕರರ ವಿರುದ್ಧ ಕೆಲವರು ಬೇನಾಮಿ ದೂರು ನೀಡುತ್ತಾರೆ. ಇದನ್ನು ಸ್ವೀಕರಿಸಿ ನೌಕರರ ವಿಚಾರಣೆ ನಡೆಸಲಾಗುತ್ತದೆ. ಈ ಕಾರಣದಿಂದ ದಕ್ಷ ಮತ್ತು ಪ್ರಾಮಾಣಿಕ ನೌಕರರಿಗೆ ತೊಂದರೆಯಾಗುತ್ತದೆ. ಅಲ್ಲದೇ, ಆಡಳಿತಾತ್ಮಕ ಸಮಸ್ಯೆಯಿಂದ ಸರ್ಕಾರಿ ಕೆಲಸಗಳಿಗೆ ಹಿನ್ನಡೆಯಾಗುತ್ತದೆ. ಇದನ್ನು ತಪ್ಪಿಸಬೇಕೆಂದು ಸರ್ಕಾರಿ ನೌಕರರ ಸಂಘದಿಂದ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಅವರು ಸೂಚನೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...