alex Certify ರಾಜ್ಯದ ರೈತರಿಗೆ ಗುಡ್ ನ್ಯೂಸ್ : ʻಭೂ ದಾಖಲೆಗಳ ಆಧುನಿಕರಣ ಯೋಜನೆʼಗೆ ಚಾಲನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ʻಭೂ ದಾಖಲೆಗಳ ಆಧುನಿಕರಣ ಯೋಜನೆʼಗೆ ಚಾಲನೆ

ಕಲಬುರಗಿ :  ಇಂದು ಕಲಬುರಗಿ ಜಿಲ್ಲಾಡಳಿತದಲ್ಲಿ ಭೂ ದಾಖಲೆಗಳ ಆಧುನಿಕರಣ ಯೋಜನೆಗೆ ಚಾಲನೆ ನೀಡಲಾಯಿತು. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವರು,  ಭೂದಾಖಲೆಗಳ ಆಧುನಿಕರಣ ((Modernization of Land Record (MLR)) ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯದ ಎಲ್ಲಾ ಕಂದಾಯ ಕಛೇರಿಗಳ ಅಭಿಲೇಖಾಲಯ ಶಾಖೆಯಲ್ಲಿನ ಕಂದಾಯ ದಾಖಲೆಗಳನ್ನು ಸ್ಕ್ಯಾನಿಂಗ್ ಹಾಗೂ ಡಿಜಿಟೈಜೇಶನ್ ಮಾಡುವ ಮೂಲಕ ದಾಖಲೆಗಳು ಶಿಥಿಲವಾಗುವುದು ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವುದು ಎಂದು ತಿಳಿಸಿದ್ದಾರೆ.

> ಕಂದಾಯ ಇಲಾಖೆಯಲ್ಲಿ ಹೆಚ್ಚಿನ ಕೋರಿಕೆಗಳು ರೈತರ ಭೂಮಿಗೆ ಸಂಬಂಧಿಸಿರುವುದರಿಂದ ಸದರಿ ದಾಖಲೆಗಳನ್ನು ಡಿಜಿಟೈಜೇಶನ್ ಮಾಡುವುದು ತುಂಬಾ ಅನಿವಾರ್ಯವೂ ಆಗಿರುತ್ತದೆ. ಅಲ್ಲದೇ ದಾಖಲೆಗಳ ಶಿಥಿಲ ಹಾಗೂ ಅಲಭ್ಯತೆಯಿಂದ ಸಾರ್ವಜನಿಕರು ನ್ಯಾಯಾಲಯದಲ್ಲಿ ದಾವೆ ದಾಖಲಿಸುವುದು ನಿಲ್ಲುತ್ತದೆ.

> ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ದಾಖಲೆಗಳನ್ನು ಗಣಕೀಕರಣ (Digitize) ಗೊಳಿಸುವ ನಿಟ್ಟಿನಲ್ಲಿ ದಾಖಲೆಗಳ ಇಂಡೆಕ್ಸಿಂಗ್, ಕ್ಯಾಟಲಾಗಿಂಗ್ ಹಾಗೂ ಡಾಟಾ ಎಂಟ್ರಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

> ಹೊಸ ತಂತ್ರಾಂಶ – “ಕಂದಾಯ ದಾಖಲೆಗಳ ಗಣಕೀಕರಣ” ವನ್ನು ಮಾನ್ಯ ಕಂದಾಯ ಸಚಿವರು ಅನಾವರಣ ಮಾಡಿರುತ್ತಾರೆ. ಸದರಿ ಅಂತರ್ಜಾಲ ತಾಣದ ವಿಳಾಸ : https://recordroom.karanataka.gov.in ಆಗಿರುತ್ತದೆ

> ‘ಕಂದಾಯ ದಾಖಲೆಗಳ ಗಣಕೀಕರಣ’ ತಂತ್ರಾಂಶದಲ್ಲಿ ದಾಖಲೆಗಳನ್ನು upload ಮಾಡಲು ರಾಜ್ಯದ ಪ್ರತಿ ಅಭಿಲೇಖಾಲಯದ ವಿಷಯ ನಿರ್ವಾಹಕರ, ಶಿರಸ್ತೇದಾರರ, ತಹಸೀಲ್ದಾರರ ಹಾಗೂ ಸಹಾಯಕ ಆಯುಕ್ತರವರ login ಗಳನ್ನು ಸೃಜಿಸಲಾಗಿದೆ.

> ರಾಜ್ಯದ ಪ್ರತಿ ಜಿಲ್ಲೆಯಿಂದ ಒಂದು ತಾಲ್ಲೂಕು ಕಛೇರಿಯನ್ನು 100 ದಿನಗಳೊಳಗಾಗಿ ಸಂಪೂರ್ಣ ಗಣಕೀಕರಣಗೊಳಿಸಲು ಅಯ್ಕೆ ಮಾಡಿಕೊಳ್ಳಲಾಗಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕನ್ನು ಸದರಿ ಕಾರ್ಯಕ್ರಮದಡಿ ಆಯ್ಕೆ ಮಾಡಿಕೊಳ್ಳಲಾಗಿದೆ.

> ಈ ಸಂಬಂಧ 2023-24 ನೇ ಸಾಲಿಗೆ DILRMP ಯೋಜನೆಯಡಿ ಪ್ರತಿ ತಾಲ್ಲೂಕು ಕಛೇರಿಗೆ 10 Data Entry Operator, 8 ಕಂಪ್ಯೂಟರ್, 3 ಸ್ಕ್ಯಾನರ್ ಗಳನ್ನು ಖರೀದಿಸಲು ಹಾಗೂ ಮಾನವ ಸಂಪನ್ಮೂಲಗಳ ಸೇವೆಯನ್ನು ಪಡೆಯಲು ತಗಲುವ ಅಂದಾಜು ವೆಚ್ಚದ ಆಧಾರದ ಮೇಲೆ ದಿನಾಂಕ: 18.01.2024 ರಂದು ಪ್ರತಿ ಜಿಲ್ಲೆಗೆ ರೂ. 14,67,500/- ಗಳಂತೆ DILRMP Gudelines ಅನ್ವಯ ಸರ್ಕಾರದಿಂದ ಬಿಡುಗಡೆಗೊಳಿಸಲಾಗಿದೆ.

> ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಅಭಿಲೇಖಾಲಯದಲ್ಲಿರುವ ಒಟ್ಟು 47813 ಕಡತಗಳು ನೂರು ದಿನಗಳಲ್ಲಿ ಸ್ಕ್ಯಾನಿಂಗ್ ಹಾಗೂ ಗಣಕೀಕರಣ (Digitize) ಮಾಡುವ ಗುರಿ ಹೊಂದಲಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...