alex Certify BIG BREAKING: ರೈತರ ಹೋರಾಟ ಅಂತ್ಯ; ಡಿಸೆಂಬರ್ 11ರಂದು ದೆಹಲಿಯಿಂದ ವಾಪಸ್ ಆಗಲಿರುವ ಅನ್ನದಾತರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ರೈತರ ಹೋರಾಟ ಅಂತ್ಯ; ಡಿಸೆಂಬರ್ 11ರಂದು ದೆಹಲಿಯಿಂದ ವಾಪಸ್ ಆಗಲಿರುವ ಅನ್ನದಾತರು

ನವದೆಹಲಿ: ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಅನ್ನದಾತನ ಹೋರಾಟ ಅಂತ್ಯಗೊಂಡಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಘೋಷಿಸಿದೆ.

ಸಿಂಘು ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಸುದ್ದಿಗೋಷ್ಠಿ ನಡೆಸಿದ್ದು, ರೈತರ ಬೃಹತ್ ಹೋರಾಟದ ಫಲವಾಗಿ ಮೂರು ಕೃಷಿ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ಅಲ್ಲದೇ ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಒಪ್ಪಿಕೊಂಡಿದೆ. ರೈತರು ದೊಡ್ಡ ಗೆಲುವಿನೊಂದಿಗೆ ವಾಪಸ್ ಆಗುತ್ತಿದ್ದಾರೆ. ಈ ಮೂಲಕ ವರ್ಷದಿಂದ ನಡೆಯುತ್ತಿದ್ದ ರೈತರ ಪ್ರತಿಭಟನೆ ಅಂತ್ಯಗೊಂಡಿದೆ ಎಂದು ತಿಳಿಸಿದೆ.

ಡಿಸೆಂಬರ್ 11ರಂದು ರೈತರು ದೆಹಲಿಯಿಂದ ವಾಪಸ್ ಆಗಲಿದ್ದಾರೆ. ಡಿ.15 ರಂದು ಸ್ವರ್ಣ ಮಂದಿರಕ್ಕೆ ತೆರಳಿದ್ದು, ಜನವರಿ 13 ರಂದು ಎಸ್ ಕೆ ಎಂ ಸಮೀಕ್ಷಾ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Najít kočku: vrcholový test pozornosti на Kde se skrývá autíčko: jen ti nejpozornější ho najdou Vynikající jemné Jak najít měsíc v koláčcích za 7 sekund: výzva