alex Certify ಜಪ್ತಿ ಮಾಡಿದ ಮನೆ ಬೀಗ ಮುರಿದು ಬಾಣಂತಿ ಒಳಗೆ ಕಳಿಸಿದ ರೈತರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಪ್ತಿ ಮಾಡಿದ ಮನೆ ಬೀಗ ಮುರಿದು ಬಾಣಂತಿ ಒಳಗೆ ಕಳಿಸಿದ ರೈತರು

ಬೆಳಗಾವಿ: ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ನಾಗನೂರಿನಲ್ಲಿ ಖಾಸಗಿ ಫೈನಾನ್ಸ್ ದಬ್ಬಾಳಿಕೆಯಿಂದ ಮನೆಯಿಂದ ಹೊರಗೆ ದೂಡಲ್ಪಟ್ಟಿದ್ದ ಬಾಣಂತಿ ಮತ್ತು ಹಸುಗೂಸನ್ನು ರೈತರು ರಕ್ಷಿಸಿದ್ದಾರೆ.

ಜಪ್ತಿ ಮಾಡಿದ ಮನೆಯ ಬೀಗ ಮುರಿದು ಅದೇ ಮನೆಯಲ್ಲಿ ಆಶ್ರಯಕ್ಕೆ ವ್ಯವಸ್ಥೆ ಮಾಡಿದ್ದಾರೆ. ರೈತ ಶಂಕರಪ್ಪ ಗದ್ದಾಡಿ ಅವರು ಪಡೆದ ಸಾಲ ಮರುಪಾವತಿಸದ ಕಾರಣಕ್ಕೆ ಕೋರ್ಟ್ ಆದೇಶದಂತೆ ಖಾಸಗಿ ಫೈನಾನ್ಸ್ ಸಿಬ್ಬಂದಿ ಮನೆಯನ್ನು ಜಪ್ತಿ ಮಾಡಿ ಕುಟುಂಬವನ್ನು ಹೊರ ಹಾಕಿದ್ದರು.

ಇದರಿಂದಾಗಿ ಮಂಗಳವಾರ ರಾತ್ರಿ ಬಾಣಂತಿ, ನವಜಾತ ಶಿಶು ಸೇರಿದಂತೆ ಕುಟುಂಬದ 7 ಮಂದಿ ರಸ್ತೆಯಲ್ಲೇ ಕಾಲ ಕಳೆಯುವಂತಾಗಿತ್ತು. ಮಾಹಿತಿ ತಿಳಿದ ರೈತ ಮುಖಂಡರು ಬೀಗ ತೆಗೆದು ಅದೇ ಮನೆಯಲ್ಲಿ ಆಶ್ರಯ ಕಲ್ಪಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ಬಾಣಂತಿ ಮತ್ತು ಮಗುವಿಗೆ ಆಶ್ರಯ ಕಲ್ಪಿಸಿದ್ದರು. ಸಂಬಂಧಿಕರ ಮನೆಯಲ್ಲಿ ವಾಸವಿರುವುದಾಗಿ ಬಾಣಂತಿ ಕುಟುಂಬದವರು ತಿಳಿಸಿದ್ದರಿಂದ ಇಲಾಖೆಯಿಂದ ಆಹಾರ ಸಾಮಗ್ರಿ ನೀಡಲಾಗಿದೆ. ಮಗು ಮತ್ತು ತಾಯಿ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se