alex Certify ಹೆಜ್ಜೆನು ದಾಳಿ: ಸಕಾಲಕ್ಕೆ ಚಿಕಿತ್ಸೆ ಸಿಗದೇ ರೈತ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಜ್ಜೆನು ದಾಳಿ: ಸಕಾಲಕ್ಕೆ ಚಿಕಿತ್ಸೆ ಸಿಗದೇ ರೈತ ಸಾವು

ಬೆಂಗಳೂರು: ಹೆಜ್ಜೇನು ದಾಳಿಯಿಂದ ರೈತರೊಬ್ಬರು ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಿಮ್ಮಗೊಂಡನಪಾಳ್ಯ ನಿವಾಸಿ ರಾಜಣ್ಣ(45) ಮೃತಪಟ್ಟ ರೈತ. ಕೂಜನಪಾಳ್ಯದ ಜಮೀನಿನಲ್ಲಿ ಟ್ಯಾಕ್ಟರ್ ನಲ್ಲಿ ಉಳಿಮೆ ಮಾಡುವಾಗ ಮರದಲ್ಲಿದ್ದ ಹೆಜ್ಜೇನು ದಿಢೀರ್ ದಾಳಿ ಮಾಡಿವೆ. ನೂರಾರು ಹೆಜ್ಜೇನು ಹುಳುಗಳು ಅವರಿಗೆ ಕಚ್ಚಿದ್ದು, ಹೊಲದಿಂದ ಸಮೀಪದ ಗ್ರಾಮಕ್ಕೆ ಓಡಿ ಬಂದಿದ್ದಾರೆ.

ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರಿಲ್ಲದ ಕಾರಣ ಆಂಬುಲೆನ್ಸ್ ನಲ್ಲಿ ನೆಲಮಂಗಲ ಆಸ್ಪತ್ರೆಗೆ ಕರೆ ತರಲಾಗಿದೆ. ಈ ವೇಳೆಗೆ ರಾಜಣ್ಣ ಮೃತಪಟ್ಟಿದ್ದಾರೆ. ಸೊಂಡೆಕೊಪ್ಪದ ಸಾರ್ವಜನಿಕ ಆಸ್ಪತ್ರೆಗೆ ರಾಜಣ್ಣ ಅವರನ್ನು ಕರೆದುಕೊಂಡು ಹೋದಾಗ ವೈದ್ಯರಿಲ್ಲ ಎಂದು ಪ್ರಾಥಮಿಕ ಚಿಕಿತ್ಸೆ ನೀಡದೆ ನೆಲಮಂಗಲ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ವೇಳೆಗೆ ಅವರು ಮೃತಪಟ್ಟಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿ ವೈದ್ಯರಿದ್ದು, ಪ್ರಥಮ ಚಿಕಿತ್ಸೆ ನೀಡಿದ್ದರೆ ರಾಜಣ್ಣ ಉಳಿಯುತ್ತಿದ್ದರು ಎಂದು ಸಂಬಂಧಿಕರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...