alex Certify ಮಗನ ಸಾವಿಗೆ ಸಿಗದ ನ್ಯಾಯ; ದಯಾಮರಣಕ್ಕೆ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ ಕುಟುಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನ ಸಾವಿಗೆ ಸಿಗದ ನ್ಯಾಯ; ದಯಾಮರಣಕ್ಕೆ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ ಕುಟುಂಬ

ಮೈಸೂರು: ಮಗನ ಸಾವಿನಿಂದ ಕಂಗೆಟ್ಟ ಕುಟುಂಬವೊಂದು ದಯಾಮರಣಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.

ಫೆ.14ರಂದು ನಂಜನಗೂಡಿನ ಹುಲ್ಲಹಳ್ಳಿಯ ಚೋಳಮ್ಮ ಎಂಬುವವರ ಪುತ್ರ ಸ್ವಾಮಿ ಸಾವನ್ನಪ್ಪಿದ್ದರು. ಗ್ರಾಮದ ಪಾಪಣ್ಣ ಎಂಬುವವರ ಮನೆಯ ಕೆಲಸಕ್ಕಿದ್ದ ಸ್ವಾಮಿ ಪಾಪಣ್ಣ ಅವರ ಮಗಳನ್ನೇ ಪ್ರೀತಿಸಿದ್ದ ಎನ್ನಲಾಗಿದೆ. ಪ್ರೇಮಿಗಳ ದಿನಾಚರಣೆಯಂದು ಪಾಪಣ್ಣನ ಮಗಳ ಹೆಸರನ್ನೇ ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಎರಡು ಕುಟುಂಬದ ನಡುವೆ ಜಗಳವಾಗಿದೆ. ಸ್ವಾಮಿ ಕುಟುಂಬದ ಮೇಲೆ ಹಲ್ಲೆ ನಡೆದಿತ್ತು.

BIG NEWS: ಮಹಿಳೆಯರ ರಕ್ಷಣೆಗೆ ಆದ್ಯತೆ; ಸಿಲಿಕಾನ್ ಸಿಟಿಯಲ್ಲಿ ಮತ್ತೆ ಟೋಯಿಂಗ್ ಆರಂಭ ಎಂದ ನೂತನ ಕಮೀಷನರ್ ಪ್ರತಾಪ್ ರೆಡ್ಡಿ

ಅಲ್ಲದೇ ಸ್ವಾಮಿಯನ್ನು ಎಳೆದೊಯ್ದು ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಸ್ವಾಮಿ ಮೃತಪಟ್ಟಿರುವುದಾಗಿ ಸ್ವಾಮಿ ಕುಟುಂಬ ಆರೋಪಿಸಿದೆ. ಅಲ್ಲದೇ ಮರಣೋತ್ತರ ಪರೀಕ್ಷೆಗೂ ಬಿಟ್ಟಿಲ್ಲ ಎಂದು ಆರೋಸಿದ್ದಾರೆ.

ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಅಥವಾ ದಯಾಮರಣ ನೀಡಿ ಎಂದು ಮೈಸೂರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಸ್ವಾಮಿ ಕುಟುಂಬ ಮನವಿ ಮಾಡಿದೆ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kaip išsaugoti miltelius ir palaikyti švarią aplinką: kodėl verta Top 10 maisto produktų, kurie padeda Kenksmingos plaukų dažų sudėties pagrindinė 6 paprasti būdai, kaip išspręsti užsikimšusį klozetą per Kaip tinkamai dozuoti druską: patarimai dėl druskos kiekio ir Pagrindiniai žiedinių kopūstų privalumai: neįtikėtinos naudos