alex Certify ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಜಮೀನು ಮಾರಾಟ: ಇಬ್ಬರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಜಮೀನು ಮಾರಾಟ: ಇಬ್ಬರು ಅರೆಸ್ಟ್

ನವಲಗುಂದ: ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಐದು ಎಕರೆ ಜಮೀನನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ನವಲಗುಂದದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಉದಯ ಶ್ರೀಧರ ಎಂಬುವರ 5 ಎಕರೆ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿದ್ದ ಆರೋಪ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿತ್ತು.

ಧಾರವಾಡದ ರಾಜೀವ್ ಗಾಂಧಿನಗರದ ಪರುಶುರಾಮ ರಂಗರಾವ್ ನಾಡಕರ್ಣಿ, ಮೊರಬಾದ ದಸ್ತು ಬರಹಗಾರ ಎಂ.ಪಿ. ಅಜಗೊಂಡ ಅವರನ್ನು ಬಂಧಿಸಲಾಗಿದೆ. ಜಮೀನು ಮಾಲೀಕ ಉದಯ ಶ್ರೀಧರ ನಾರಾಯಣ ಮುಳಗುಂದ ಅವರ ಹೆಸರಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಗುಮ್ಮಗೊಳ ಗ್ರಾಮದ ಸರ್ವೆ ನಂಬರ್ 255/8ರಲ್ಲಿನ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ.

ಜಮೀನು ಮಾಲಿಕ ಉದಯ ಶ್ರೀಧರ್ ಜುಲೈನಲ್ಲಿ ನವಲಗುಂದ ಠಾಣೆಗೆ ದೂರು ನೀಡಿದ್ದರು. ಆರೋಪಿ ಪರಶುರಾಮ ಮತ್ತು ಎಂ.ಪಿ. ಅಜಗೊಂಡ ಮೂಲಕ ಖರೀದಿ ಪತ್ರ ತಯಾರಿಸಿ ನವಲಗುಂದ ಉಪ ನೋಂದಣಿ ಕಚೇರಿಯಲ್ಲಿ ಬಸವರಾಜ ನಿಂಗಪ್ಪ ದಿವಟಗಿ ಅವರಿಗೆ ಖರೀದಿ ಪತ್ರ ನೋಂದಣಿ ಮಾಡಿಸಿದ್ದರು. ಆ ಖರೀದಿ ಪತ್ರಕ್ಕೆ ಮೌಲಾಸಾಬ ಮತ್ತು ಮಾರುತಿ ಸಾಕ್ಷಿಯಾಗಿ ಸಹಿ ಹಾಕಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...
Avokaadopasteedi, kurgi Eksootiline seemneteta nektariini moos: Võluv kikaseemnete, avokaado ja kirsstomatite Eksootiline Krabi, Munaga ja Kurk Pähklitega vürtsitatud õunamoos Eksootiline Tomatisalat Adygei juustu ja Borodino Topeltkatla maagia hapukurgiga: Azu Tatari Eksootiline Maitsekooslus: Kebabi Saladuslik Partner - Ketšupi Eksootiline rannakarpide salat Eksootiline India raita Kuidas Kokkinisto: Kreeka keele maailma põnev süvenemine Eksootiline Maagilise ploomikompoti retsept talvisteks Maagiliselt