alex Certify ಕಂಕಣಭಾಗ್ಯ ಕೂಡಿ ಬರಬೇಕೆಂದ್ರೆ ನಾಳೆ ಅವಶ್ಯಕವಾಗಿ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಕಣಭಾಗ್ಯ ಕೂಡಿ ಬರಬೇಕೆಂದ್ರೆ ನಾಳೆ ಅವಶ್ಯಕವಾಗಿ ಮಾಡಿ ಈ ಕೆಲಸ

ವರ್ಷದ ಪ್ರತಿ ದಿನವೂ ತನ್ನದೇ ಆದ ಮಹತ್ವವನ್ನು ಪಡೆದಿದೆ. ಅದರಲ್ಲೂ ಕೆಲವು ದಿನಗಳು ವಿಶೇಷವಾಗಿರುತ್ತವೆ. ಮದುವೆಗೆ ಸಂಬಂಧಿಸಿ ವಿಷಯಗಳಿಗೆ ನಾಳೆ ವಿಶೇಷ ದಿನವಾಗಿದೆ. ನಾಳೆ  ವಿವಾಹ ಪಂಚಮಿ ಆಚರಿಸಲಾಗುತ್ತಿದೆ. ರಾಮ ಮತ್ತು ಸೀತೆ ಮದುವೆಯಾಗಿದ್ದು,ವಿವಾಹ ಪಂಚಮಿಯಂದು. ವಿವಾಹ ಪಂಚಮಿಯಂದು ಮದುವೆಯಾಗುವುದು ಶುಭಕರವೆಂದು ನಂಬಲಾಗಿದೆ.

ಫ್ಯಾನ್ ಗೆ ಏಕೆ ಮೂರು ರೆಕ್ಕೆಗಳು ಇರುತ್ತವೆ ಗೊತ್ತಾ….?

ಆದ್ರೆ  ಕೆಲವರು ವಿವಾಹ ಪಂಚಮಿಯಂದು ಮಗಳ ಮದುವೆ ಮಾಡುವುದಿಲ್ಲ. ಮದುವೆ ನಂತ್ರ ಸೀತೆ ಸಾಕಷ್ಟು ದುಃಖ ಅನುಭವಿಸಿದ್ದಳು. ಹಾಗಾಗಿ ವಿವಾಹ ಪಂಚಮಿಯಂದು ಮದುವೆ ಮಾಡಬಾರದು ಎಂಬ ನಂಬಿಕೆಯೂ ಇದೆ. ಅದೇನೇ ಇರಲಿ, ವಿವಾಹ ಪಂಚಮಿಯಂದು ಮಾಡುವ ಕೆಲ ಕೆಲಸಗಳಿಂದ ಶೀಘ್ರ ಮದುವೆ ಯೋಗ ಪ್ರಾಪ್ತಿಯಾಗಲಿದೆ.

ವಿವಾಹ ಪಂಚಮಿಯ ದಿನದಂದು ಶ್ರೀರಾಮ ಮತ್ತು ಸೀತೆಯ ವಿವಾಹವನ್ನು ಮಾಡಬೇಕು. ಬೆಳಿಗ್ಗೆ ಸ್ನಾನ ಮಾಡಿ ಶ್ರೀರಾಮ ವಿವಾಹದ ಪ್ರತಿಜ್ಞೆ ಮಾಡಬೇಕು. ನಂತರ ಶ್ರೀರಾಮ ಮತ್ತು ತಾಯಿ ಸೀತೆಯ ವಿವಾಹದ ಫೋಟೋ ಅಥವಾ ವಿಗ್ರಹವನ್ನು ಸ್ಥಾಪಿಸಬೇಕು. ತಿಲಕದ ನಂತರ, ಶ್ರೀರಾಮನಿಗೆ ಹಳದಿ ಬಟ್ಟೆಗಳನ್ನು ಮತ್ತು ತಾಯಿ ಸೀತೆಗೆ ಕೆಂಪು ಬಟ್ಟೆಗಳನ್ನು ಅರ್ಪಿಸಬೇಕು. ನಂತರ ಆರತಿ ಮಾಡಬೇಕು. ಸಿಹಿತಿಂಡಿಗಳನ್ನು ಅರ್ಪಿಸಿಬೇಕು. ಗಂಟು ಹಾಕಿದ ಬಟ್ಟೆಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು.

ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ: ಫಲಾನುಭವಿಗಳ ಪಟ್ಟಿ ಚೆಕ್ ಮಾಡಲು ಇಲ್ಲಿದೆ ಟಿಪ್ಸ್

ಹೀಗೆ ಮಾಡುವುದರಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ.

ಮದುವೆಗೆ ಅಡ್ಡಿಯಾಗ್ತಿದ್ದರೆ, ವಿವಾಹ ಪಂಚಮಿಯಂದು ರಾಮ-ಸೀತೆಯ ಪೂಜೆ ಮಾಡಿ, ಪ್ರಾರ್ಥನೆ ಮಾಡಿದ್ರೆ ಬಯಕೆ ಈಡೇರುತ್ತದೆ. ರಾಮಚರಿತಮಾನಸವನ್ನು ಈ ದಿನ ಪಠಿಸಬೇಕು. ಓಂ ಜಾನಕಿ ವಲ್ಲಭಾಯೈ ನಮಃ ಎಂಬ ಮಂತ್ರವನ್ನು ಪಠಿಸುವುದರಿಂದ ಎಲ್ಲ ಆಸೆ ಈಡೇರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...