ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯೂ ಹಿಂದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಪ್ರತಿಪಾದಿಸಿದ್ದಾರೆ. ಎಲ್ಲಾ ಭಾರತೀಯರ ಡಿಎನ್ಎ ಒಂದೇ ಆಗಿರುತ್ತದೆ ಮತ್ತು ಅವರ ಆಚರಣೆಗಳನ್ನು ಯಾರೂ ಬದಲಾಯಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಛತ್ತೀಸ್ಗಢದ ಸುರ್ಗುಜಾ ಜಿಲ್ಲೆಯ ಪ್ರಧಾನ ಕಛೇರಿಯಾದ ಅಂಬಿಕಾಪುರದಲ್ಲಿ ಸ್ವಯಂ ಸೇವಕರ (ಸಂಘದ ಸ್ವಯಂಸೇವಕರು) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ವೈವಿಧ್ಯತೆಯಲ್ಲಿ ಏಕತೆಯನ್ನು ಭಾರತದ ಪುರಾತನ ವೈಶಿಷ್ಟ್ಯವೆಂದು ಹೇಳಿದರು. ಹಿಂದುತ್ವವು ಎಲ್ಲರನ್ನು ಕರೆದುಕೊಂಡು ಹೋಗುವುದನ್ನು ನಂಬುವ ವಿಶ್ವದ ಏಕೈಕ ಕಲ್ಪನೆಯಾಗಿದೆ ಎಂದರು.
“ಭಾರತದಲ್ಲಿ ವಾಸಿಸುವ ಎಲ್ಲರೂ ಹಿಂದೂಗಳು ಎಂದು ನಾವು 1925 ರಿಂದ (ಆರ್ ಎಸ್ಎಸ್ ಸ್ಥಾಪನೆಯಾದಾಗ) ಹೇಳುತ್ತಿದ್ದೇವೆ. ಭಾರತವನ್ನು ತಮ್ಮ ಮಾತೃಭೂಮಿ ಎಂದು ಪರಿಗಣಿಸುವವರು ವಿವಿಧತೆಯಲ್ಲಿ ಏಕತೆಯ ಸಂಸ್ಕೃತಿಯೊಂದಿಗೆ ಬದುಕಲು ಬಯಸುತ್ತಾರೆ . ಅವರು ಯಾವುದೇ ಧರ್ಮ, ಸಂಸ್ಕೃತಿ, ಭಾಷೆ ಮತ್ತು ಆಹಾರ ಪದ್ಧತಿ ಮತ್ತು ಸಿದ್ಧಾಂತವನ್ನು ಅನುಸರಿಸಿದರು ಈ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡುತ್ತಾರೆ ಎಂದು ಮೋಹನ್ ಭಾಗವತ್ ಹೇಳಿದರು.
ಹಿಂದುತ್ವದ ಸಿದ್ಧಾಂತವು ವೈವಿಧ್ಯತೆಯನ್ನು ಗುರುತಿಸುತ್ತದೆ ಮತ್ತು ಜನರಲ್ಲಿ ಏಕತೆಯ ನಂಬಿಕೆಯನ್ನು ಹುಟ್ಟಿಸುತ್ತದೆ. ಸಾವಿರಾರು ವರ್ಷಗಳಿಂದ ಈ ದೇಶದಲ್ಲಿ ಇಂತಹ ವೈವಿಧ್ಯತೆಗಳನ್ನು ಒಗ್ಗೂಡಿಸಿರುವ ಕಾರಣ, ವೈವಿಧ್ಯತೆಗಳನ್ನು ಏಕೀಕರಿಸುವಲ್ಲಿ ನಂಬಿರುವ ಇಡೀ ಪ್ರಪಂಚದಲ್ಲಿ ಹಿಂದೂತ್ವವು ಏಕೈಕ ಕಲ್ಪನೆಯಾಗಿದೆ. ಇದು ಸತ್ಯ ಮತ್ತು ನೀವು ಅದನ್ನು ದೃಢವಾಗಿ ಮಾತನಾಡಬೇಕು. ಅದರ ಆಧಾರದ ಮೇಲೆ ನಾವು ಒಂದಾಗಬಹುದು. ವೈಯಕ್ತಿಕ ಮತ್ತು ರಾಷ್ಟ್ರೀಯ ಸ್ವರೂಪವನ್ನು ನಿರ್ಮಿಸುವುದು ಮತ್ತು ಜನರಲ್ಲಿ ಏಕತೆಯನ್ನು ತರುವುದು ಸಂಘದ ಕೆಲಸವಾಗಿದೆ ಎಂದು ಆರ್ಎಸ್ಎಸ್ ನಾಯಕ ಹೇಳಿದರು.