alex Certify ಬಳ್ಳಾರಿ ಜೈಲಿಗೆ ಹೋದ್ರೂ ಕಮ್ಮಿ ಆಗಿಲ್ಲ ನಟ ‘ದರ್ಶನ್’ ಕ್ರೇಜ್ : ವಾಹನಗಳ ಮೇಲೆ ಕೈದಿ ನಂ.511 ಟ್ರೆಂಡಿಂಗ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಳ್ಳಾರಿ ಜೈಲಿಗೆ ಹೋದ್ರೂ ಕಮ್ಮಿ ಆಗಿಲ್ಲ ನಟ ‘ದರ್ಶನ್’ ಕ್ರೇಜ್ : ವಾಹನಗಳ ಮೇಲೆ ಕೈದಿ ನಂ.511 ಟ್ರೆಂಡಿಂಗ್..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬಳ್ಳಾರಿ ಜಿಲ್ಲೆಗೆ ಶಿಫ್ಟ್ ಆಗಿದ್ದು, ಬಿಗಿ ಭದ್ರತೆ ವಹಿಸಲಾಗಿದೆ.

ನಟ ದರ್ಶನ್ ಬಳ್ಳಾರಿ ಜೈಲಿಗೆ ಹೋದರೂ ನಟ ದರ್ಶನ್ ಕ್ರೇಜ್ ಒಂಚೂರು ಕಡಿಮೆ ಆಗಿಲ್ಲ. ದರ್ಶನ್ ಗೆ ಬಳ್ಳಾರಿ ಜೈಲಿನಲ್ಲಿ ನೀಡಿದ್ದ 511 ಖೈದಿ ನಂಬರ್ ನ್ನು ಅಭಿಮಾನಿಗಳು ಟ್ರೆಂಡ್ ಮಾಡುತ್ತಿದ್ದಾರೆ.

ಹೌದು. ಆಟೋ , ಬೈಕ್ ಸೇರಿದಂತೆ ತಮ್ಮ ವಾಹನಗಳಲ್ಲಿ ಬಳ್ಳಾರಿ ಖೈದಿ ನಂ.511 ಎಂದು ಸ್ಟಿಕ್ಕರ್ ಹಾಕಿಸಿಕೊಂಡು ಟ್ರೆಂಡಿಂಗ್ ಮಾಡುತ್ತಿದ್ದಾರೆ. ಇಷ್ಟು ದಿನ 6106 ಟ್ಯಾಟೂ ಹಾಕಿಸಿದ್ದಅಭಿಮಾನಿಗಳನ್ನು ಅದನ್ನು ತೆಗೆಸಿ ಬಳ್ಳಾರಿ ಖೈದಿ ನಂ.511  ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಪರ ಹಲವರು ಬ್ಯಾಟ್ ಬೀಸಿದ್ದಾರೆ. ದರ್ಶನ್ ಕೆಲ ಅಭಿಮಾನಿಗಳು ನಮ್ಮ ಬಾಸ್ ನ್ನು ಎಂದಿಗೂ ಬಿಟ್ಟುಕೊಡುವ ಮಾತೇ ಇಲ್ಲ, ಎಂದಿಗೂ ಅವರು ನಮ್ಮ ಬಾಸ್ ಎಂದು ಹೇಳುವ ಮೂಲಕ ಅಭಿಮಾನ ಮೆರೆಯುತ್ತಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...