alex Certify ಮಹಿಳೆಯನ್ನು ಕೊಂದರೂ ಸಿಗದ ತೃಪ್ತಿ….! ಅಂತ್ಯಕ್ರಿಯೆ ವೇಳೆ ಶವ ತುಳಿಯಲು ಮತ್ತೆ ಮರಳಿ ಬಂದ ಆನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯನ್ನು ಕೊಂದರೂ ಸಿಗದ ತೃಪ್ತಿ….! ಅಂತ್ಯಕ್ರಿಯೆ ವೇಳೆ ಶವ ತುಳಿಯಲು ಮತ್ತೆ ಮರಳಿ ಬಂದ ಆನೆ

ಇದು ಆನೆಯೊಂದರ ಸೇಡಿನ‌ ಕಥೆ. ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ಆನೆಯೊಂದು ಮಹಿಳೆಯನ್ನು ಕೊಂದಿದ್ದಲ್ಲದೆ, ಆಕೆಯ ಅಂತ್ಯಕ್ರಿಯೆ ವೇಳೆ ಪುನಃ ಧಾವಿಸಿ ಆಕೆಯ ಶವವನ್ನು ತುಳಿದು ಹಾಕಿದೆ.

ರಾಯ್ಪಾಲ್ ಗ್ರಾಮದ ಕೊಳವೆಬಾವಿಯಿಂದ ಮಾಯಾ ಮುರ್ಮು ನೀರು ಸಂಗ್ರಹಿಸುತ್ತಿದ್ದಾಗ ದಾಲ್ಮಾ ವನ್ಯಜೀವಿ ಅಭಯಾರಣ್ಯದಿಂದ ಬಂದ ಆನೆ ದಾಳಿ ಮಾಡಿತ್ತು.

ಆನೆ ತುಳಿದಿದ್ದರಿಂದ ಆಕೆ ಸಾವನ್ನಪ್ಪಿದ್ದಳು. ಆದರೆ, ಕಥೆ ಇಲ್ಲಿಗೇ ಮುಗಿಯಲಿಲ್ಲ. ಅನೆಯು ಮಹಿಳೆಯ ಅಂತ್ಯಕ್ರಿಯೆ ವೇಳೆ ಪುನಃ ಆಗಮಿಸಿ ಆಕೆಯ ಶವದ ಮೇಲೆ ದಾಳಿ ಮಾಡಿತು.

ಮೃತರ ಕುಟುಂಬಸ್ಥರು ಭಯಭೀತರಾಗಿ‌ ಓಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಆನೆ ಕೆಲಕಾಲ ಅಕ್ಕಪಕ್ಕದ ಪ್ರದೇಶಗಳಿಗೆ ನುಗ್ಗಿತ್ತು. ಒಬ್ಬ ಮಹಿಳೆ ತನ್ನನ್ನು ರಕ್ಷಿಸಿಕೊಳ್ಳಲು ಮರ ಹತ್ತಬೇಕಾಯಿತು.

https://twitter.com/kanak_news/status/1535640234175926272?ref_src=twsrc%5Etfw%7Ctwcamp%5Etweetembed%7Ctwterm%5E1535640234175926272%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Felephant-kills-woman-in-odisha-comes-back-to-trample-her-corpse-5367901.html

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...